Select Your Language

Notifications

webdunia
webdunia
webdunia
webdunia

ವಿದ್ಯಾರ್ಥಿಗಳಿಗೆ ಕಾಂತಾರ ಆಫರ್ ಕೊಟ್ಟ ಶಾಸಕ ರಘುಪತಿ ಭಟ್

ವಿದ್ಯಾರ್ಥಿಗಳಿಗೆ ಕಾಂತಾರ ಆಫರ್ ಕೊಟ್ಟ ಶಾಸಕ ರಘುಪತಿ ಭಟ್
ಬೆಂಗಳೂರು , ಗುರುವಾರ, 20 ಅಕ್ಟೋಬರ್ 2022 (08:10 IST)
ಬೆಂಗಳೂರು: ಎಲ್ಲಿ ಹೋದರೂ, ಯಾರ ಬಾಯಲ್ಲೂ ಈಗ ಕಾಂತಾರ ಸಿನಿಮಾದ್ದೇ ಮಾತು. ಇದೀಗ ಉಡುಪಿ ಶಾಸಕ ರಘುಪತಿ ಭಟ್ ವಿದ್ಯಾರ್ಥಿಗಳಿಗೆ ಕಾಂತಾರ ವೀಕ್ಷಿಸುವ ಆಫರ್ ಕೊಟ್ಟಿದ್ದಾರೆ.

ಕಳೆದ ವರ್ಷ ಕೇದಾರ ಉತ್ಥಾನ ಪ್ರತಿಷ್ಠಾನದ ವತಿಯಿಂದ ಗದ್ದೆಯಲ್ಲಿ ಭತ್ತ ಗಿಡ ಹಾಕುವ ಕಾರ್ಯಕ್ರಮದಲ್ಲಿ ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ ಭಾಗಿಯಾಗಿದ್ದರು. ಇಂದು ಅದೇ ಗದ್ದೆಯಲ್ಲಿ ಕಳೆ ಕೀಳುವ ಕೆಲಸದಲ್ಲಿ ಭಾಗಿಯಾಗುವ ಎನ್ ಎಸ್ಎಸ್ ವಿದ್ಯಾರ್ಥಿಗಳಿಗೆ ಕಾಂತಾರ ಸಿನಿಮಾ ಉಚಿತವಾಗಿ ವೀಕ್ಷಿಸಲು ಆಫರ್ ಕೊಟ್ಟಿದ್ದಾರೆ ಶಾಸಕರು.

ವಿದ್ಯಾರ್ಥಿಗಳನ್ನು ಉದ್ದೇಶಿಸಿ ರಘುಪತಿ ಭಟ್ ಮಾತನಾಡುವ ವಿಡಿಯೋ ಈಗ ವೈರಲ್ ಆಗಿದೆ. ಸುಮಾರು 500 ವಿದ್ಯಾರ್ಥಿಗಳಿಗೆ ರಘುಪತಿ ಭಟ್ ಕಾಂತಾರ ಸಿನಿಮಾವನ್ನು ಉಚಿತವಾಗಿ ವೀಕ್ಷಿಸಲು ಅವಕಾಶ ಕಲ್ಪಿಸಿದ್ದಾರೆ.

-Edited by Rajesh Patil

Share this Story:

Follow Webdunia kannada

ಮುಂದಿನ ಸುದ್ದಿ

ಈ ವಾರಂತ್ಯಕ್ಕೆ ಕಿಚ್ಚ ಸುದೀಪ್ ಬಿಗ್ ಬಾಸ್ ಗೆ ಬರಲ್ಲ?!