Select Your Language

Notifications

webdunia
webdunia
webdunia
webdunia

ಮತ್ತೆ ಬಣ್ಣ ಹಚ್ಚಲಿರುವ ಮೇಘನಾ ರಾಜ್: ಚಿರು ಬರ್ತ್ ಡೇ ದಿನ ಗುಡ್ ನ್ಯೂಸ್

ಮತ್ತೆ ಬಣ್ಣ ಹಚ್ಚಲಿರುವ ಮೇಘನಾ ರಾಜ್: ಚಿರು ಬರ್ತ್ ಡೇ ದಿನ ಗುಡ್ ನ್ಯೂಸ್
ಬೆಂಗಳೂರು , ಶನಿವಾರ, 16 ಅಕ್ಟೋಬರ್ 2021 (10:54 IST)
ಬೆಂಗಳೂರು: ಪತಿ ಚಿರಂಜೀವಿ ಸರ್ಜಾ ಅಕಾಲಿಕ ಮರಣದ ಬಳಿಕ ಚಿತ್ರರಂಗದಿಂದ ದೂರವೇ ಉಳಿದಿರುವ ನಟಿ ಮೇಘನಾ ರಾಜ್ ಮಗ ರಾಯನ್ ಸರ್ಜಾ ಆರೈಕೆಯಲ್ಲೇ ಕಾಲ ಕಳೆದಿದ್ದಾರೆ. ಇದೀಗ ಮತ್ತೆ ಬಣ್ಣದ ಲೋಕಕ್ಕೆ ಮರಳುವ ಸೂಚನೆ ನೀಡಿದ್ದಾರೆ.

 

ಚಿರು ಅಗಲಿದ ಬಳಿಕ ಜಾಹೀರಾತು ಶೂಟಿಂಗ್ ನಲ್ಲಿ ಭಾಗಿಯಾಗಿದ್ದು ಬಿಟ್ಟರೆ ಮೇಘನಾ ಬಣ್ಣ ಹಚ್ಚಿರಲಿಲ್ಲ. ಇತ್ತೀಚೆಗೆ ಮಾಧ್ಯಮ ಸಂದರ್ಶನವೊಂದರಲ್ಲಿ ಜನ ಬಯಸಿದರೆ ಮತ್ತೆ ಅಭಿನಯಿಸಲು ರೆಡಿ ಎಂದಿದ್ದರು.

ಮೊನ್ನೆಯಷ್ಟೇ ತಮ್ಮ ಇನ್ ಸ್ಟಾಗ್ರಾಂ ಪುಟದಲ್ಲಿ ಸದ್ಯದಲ್ಲೇ ನೀವೆಲ್ಲಾ ನಿರೀಕ್ಷಿಸುತ್ತಿರುವ ಸುದ್ದಿ ಕೊಡುವುದಾಗಿ ಹೇಳಿಕೊಂಡಿದ್ದರು. ಅದರಂತೆ ಈಗ ಮತ್ತೆ ಬಣ್ಣದ ಲೋಕಕ್ಕೆ ಮರಳುತ್ತಿರುವ ಸುದ್ದಿ ಕೊಟ್ಟಿದ್ದಾರೆ. ಸ್ನೇಹಿತ ಪನ್ನಗಾಭರಣ ನಿರ್ಮಾಣದಲ್ಲಿ ಹೊಸ ಸಿನಿಮಾವೊಂದನ್ನು ಮೇಘನಾ ಒಪ್ಪಿಕೊಂಡಿದ್ದಾರಂತೆ. ಅಕ್ಟೋಬರ್ 17 ರಂದು ಚಿರು ಸರ್ಜಾ ಜನ್ಮದಿನವಾಗಿದ್ದು, ಅದೇ ದಿನ ತಮ್ಮ ಕಮ್ ಬ್ಯಾಕ್ ಸಿನಿಮಾ ಮುಹೂರ್ತದ ಸುದ್ದಿ ಕೊಡಲಿದ್ದಾರೆ ಮೇಘನಾ.

Share this Story:

Follow Webdunia kannada

ಮುಂದಿನ ಸುದ್ದಿ

ಡಾಲಿ ಧನಂಜಯ್ ರತ್ನನ್ ಪ್ರಪಂಚಕ್ಕೆ ನಟಿ ರಮ್ಯಾ ಬಹುಪರಾಕ್