Select Your Language

Notifications

webdunia
webdunia
webdunia
webdunia

ಚಿರು ಸರ್ಜಾ ಕೊನೆಯ ಸಿನಿಮಾಗೆ ಮೇಘನಾ ರಾಜ್ ಪ್ರಚಾರ

ಚಿರು ಸರ್ಜಾ ಕೊನೆಯ ಸಿನಿಮಾಗೆ ಮೇಘನಾ ರಾಜ್ ಪ್ರಚಾರ
ಬೆಂಗಳೂರು , ಸೋಮವಾರ, 22 ಮಾರ್ಚ್ 2021 (10:10 IST)
ಬೆಂಗಳೂರು: ಚಿರಂಜೀವಿ ಸರ್ಜಾ ಕೊನೆಯ ಸಿನಿಮಾ ‘ರಣಂ’ ಮಾರ್ಚ್ 26 ರಂದು ತೆರೆಗೆ ಬರಲಿದ್ದು, ಈ ಸಿನಿಮಾವನ್ನು ವೀಕ್ಷಿಸುವಂತೆ ಪತ್ನಿ ಮೇಘನಾ ರಾಜ್ ಪ್ರಚಾರ ಮಾಡಿದ್ದಾರೆ.



ಈ ಸಿನಿಮಾವನ್ನು ಯಾಕೆ ವೀಕ್ಷಿಸಬಹುದು ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಈ ಸಿನಿಮಾ ಚಿರು ಕೊನೆಯ ಸಿನಿಮಾ ಎಂಬ ಕಾರಣಕ್ಕೆ ಮಾತ್ರವಲ್ಲ. ಈ ಸಿನಿಮಾ ಚಿರು ಪಾಲಿಗೆ ಸ್ಪೆಷಲ್ ಆಗಿತ್ತು. ಈ ಸಿನಿಮಾದಲ್ಲಿ ಚಿರು ಆಕ್ಷನ್ ಸೀಕ್ವೆನ್ಸ್ ನನಗೆ ತೋರಿಸಿದ್ದರು. ರಣಂನಲ್ಲಿ ಸ್ಪೆಷಲ್ ಇದೆ ಎಂದು ಅವರು ಮೊದಲೇ ಹೇಳಿದ್ದರು.

ರಣಂ ಸಿನಿಮಾದಲ್ಲಿ ರೈತರ ಬಗ್ಗೆ, ರಾಜಕೀಯ ಬಗ್ಗೆ ,ಯುವಕರ ಬಗ್ಗೆ ಸೇರಿದಂತೆ ಎಲ್ಲಾ ಸೆನ್ಸಿಟಿವ್ ವಿಚಾರವನ್ನು ವಿಶೇಷವಾಗಿ ಹೇಳಲಾಗಿದೆ. ಹೀಗಾಗಿ ಈ ಸಿನಿಮಾವನ್ನು ಥಿಯೇಟರ್ ನಲ್ಲಿ ನೋಡಿ ಪ್ರೋತ್ಸಾಹಿಸಿ ಎಂದು ಮೇಘನಾ ರಾಜ್ ಮನವಿ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಣ್ಣು ಹೊಡೆಯಾಕ ಹಾಡಿಗೆ ಕೋಟಿ ವೀಕ್ಷಣೆ: ಖುಷ್ ಆದ ಶ್ರೇಯಾ ಘೋಷಾಲ್