Select Your Language

Notifications

webdunia
webdunia
webdunia
webdunia

ಯುವ ನಿರ್ದೇಶಕರಿಗೆ ಅವಕಾಶ ನೀಡುತ್ತಿರುವ ಮಹೇಶ್ ಬಾಬು

ಯುವ ನಿರ್ದೇಶಕರಿಗೆ ಅವಕಾಶ ನೀಡುತ್ತಿರುವ ಮಹೇಶ್ ಬಾಬು
ಹೈದರಾಬಾದ್ , ಭಾನುವಾರ, 17 ಜನವರಿ 2021 (16:41 IST)
ಹೈದರಾಬಾದ್ : ಇತ್ತೀಚಿನ ದಿನಗಳಲ್ಲಿ ಯುವ ನಿರ್ದೇಶಕರು ಹೊಸ ಆಲೋಚನೆಗಳೊಂದಿಗೆ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಮತ್ತು ಕಥೆಯನ್ನು ಹೊಸದಾಗಿ ಪ್ರಸ್ತುತಪಡಿಸುತ್ತಿದ್ದಾರೆ. ಹಾಗಾಗಿ ರಜನೀಕಾಂತ್ ಅವರಂತಹ ಹಿರಿಯ ಸ್ಟಾರ್ ನಾಯಕರು ಯುವ ನಿರ್ದೇಶಕರಿಗೆ ಅವಕಾಶಗಳನ್ನು ನೀಡುತ್ತಿದ್ದಾರೆ.

ಈ ಹಿನ್ನಲೆಯಲ್ಲಿ ಇದೀಗ ನಟ ಮಹೇಶ್ ಬಾಬು ಅವರು ಯುವ ನಿರ್ದೇಶಕರು ಹೇಳುವ ಕಥೆಗಳನ್ನು ಕೇಳಲು ಪ್ರಾರಂಭಿಸಿದ್ದಾರೆ. ಅಲ್ಲದೇ ಅವರಿಗೆ ಇಷ್ಟವಾದ ಕಥೆಗಳಿಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎನ್ನಲಾಗಿದೆ. ಯುವ ನಿರ್ದೇಶಕರು ತಮಗೆ ಹೇಳಿದ್ದನ್ನು ವಿಶ್ವಾಸದಿಂದ ಅನುಸರಿಸುತ್ತಿದ್ದಾರೆ ಎನ್ನಲಾಗಿದೆ.

ಹೀಗಾಗಿ ಅವರು  ಅನಿಲ್ ರವಿಪುಡಿ ನಿರ್ದೇಶನದ ‘ಸರಿಲೆರು ನಿಕೆವ್ವರು’ ಚಿತ್ರವನ್ನು ನಿರ್ಮಿಸುವ ಮೂಲಕ ಅತಿ ಹೆಚ್ಚು ಗಳಿಕೆ ಮಾಡಿದ್ದಾರೆ. ಹಾಗೇ ಯುವ ನಿರ್ದೇಶಕ ಪರಶುರಾಮ್ ಅವರ ಜೊತೆ  ‘ಸರ್ಕರುವರಿ ಪಾಟಾ’ ಚಿತ್ರ ಮಾಡುತ್ತಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವರುಣ್ ತೇಜ್ ಹುಟ್ಟುಹಬ್ಬದಂದು ಹೊಸ ಚಿತ್ರದ ಫಸ್ಟ್ ಲುಕ್ ರಿಲೀಸ್