Select Your Language

Notifications

webdunia
webdunia
webdunia
webdunia

ಚಿತ್ರರಂಗದಿಂದ ಬ್ಯಾನ್ ಆಗಿದ್ದಕ್ಕೆ ಈ ಸ್ಟಾರ್ ನಟನ ಮೊರೆ ಹೋದ ಮಡೆನೂರು ಮನು

Madenur Manu

Krishnaveni K

ಬೆಂಗಳೂರು , ಶನಿವಾರ, 14 ಜೂನ್ 2025 (13:44 IST)
ಬೆಂಗಳೂರು: ಕನ್ನಡ ಚಿತ್ರರಂಗದಿಂದ ಬ್ಯಾನ್ ಆಗಿರುವ ಕಾಮಿಡಿ ಕಿಲಾಡಿಗಳು ಖ್ಯಾತಿಯ ನಟ ಮಡೆನೂರು ಮನು ಈಗ ಅವಕಾಶಕ್ಕಾಗಿ ಬೇಡಿಕೊಳ್ಳುತ್ತಿದ್ದಾರೆ. ಇದಕ್ಕಾಗಿ ಅವರು ಈ ಸ್ಟಾರ್ ನಟನ ಮೊರೆ ಹೋಗಿದ್ದಾರೆ.

ಮಡೆನೂರು ಮನು ಸಹ ನಟಿ ಮೇಲೆ ಅತ್ಯಾಚಾರ, ಬಲವಂತದಿಂದ ತಾಳಿ ಕಟ್ಟಿದ ಆರೋಪದಲ್ಲಿ ಬಂಧಿತರಾಗಿದ್ದರು. ಇದೀಗ ಅವರು ಜಾಮೀನಿನ ಮೇಲೆ ಹೊರಗೆ ಬಂದಿದ್ದಾರೆ. ಆದರೆ ಜೈಲಿನಲ್ಲಿದ್ದಾಗ ದರ್ಶನ್, ಶಿವಣ್ಣ ಬಗ್ಗೆ ಆಕ್ಷೇಪಾರ್ಹವಾಗಿ ಮಾತನಾಡಿದ ಅಡಿಯೋವೊಂದು ವೈರಲ್ ಆಗಿತ್ತು. ಈ ಹಿನ್ನಲೆಯಲ್ಲಿ ಅವರನ್ನು ಚಿತ್ರರಂಗದಿಂದ ಬ್ಯಾನ್ ಮಾಡಲಾಗಿದೆ.

ಇದೀಗ ಮನುಗೆ ಕಿರುತೆರೆಯಲ್ಲೂ ಅವಕಾಶವಿಲ್ಲ, ಚಿತ್ರರಂಗದಲ್ಲೂ ಇಲ್ಲ ಎಂಬಂತಾಗಿದೆ. ಹೀಗಾಗಿ ಮಡೆನೂರು ಮನು ಸೊರಗಿ ಹೋಗಿದ್ದು, ಒಂದು ಅವಕಾಶಕ್ಕಾಗಿ ನಟ ಧ್ರುವ ಸರ್ಜಾ ಮೊರೆ ಹೋಗಿದ್ದಾರೆ. ನಾನು ಜೈಲಿನಿಂದ ಬಂದ ಮೇಲೆ ಖಿನ್ನತೆಗೊಳಗಾಗಿದ್ದಾನೆ. ಒಂದು ಅವಕಾಶ ಕೊಡಿಸಿ ಸಾರ್ ಎಂದು ಬೇಡಿಕೊಳ್ಳುತ್ತಿದ್ದಾರಂತೆ.

ಇದಕ್ಕೆ ಧ್ರುವ ಸರ್ಜಾ ಕೂಡಾ ದರ್ಶನ್ ಸರ್, ಶಿವಣ್ಣ ನಮ್ಮ ಹಿರಿಯ ನಟರು. ಅವರ ಕ್ಷಮೆ ಕೇಳು ಎಂದು ಕೇಳಿಕೊಂಡಿದ್ದಾರೆ ಎನ್ನಲಾಗಿದೆ. ಇದೀಗ ಮಡೆನೂರು ಮನು ಈ ರೀತಿ ಮಾಡಿ ಮತ್ತೆ ಚಿತ್ರರಂಗದಲ್ಲಿ ಅವಕಾಶ ಗಿಟ್ಟಿಸಿಕೊಳ್ಳುತ್ತಾರಾ ನೋಡಬೇಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

Sanjay Kapur: ವಿಮಾನ ಅಪಘಾತಕ್ಕೆ ಸಂತಾಪ ಸೂಚಿಸಿದ ಬೆನ್ನಲ್ಲೇ ಕರೀಷ್ಮಾ ಕಪೂರ್ ಮಾಜಿ ಪತಿ ಸಾವು