Select Your Language

Notifications

webdunia
webdunia
webdunia
webdunia

Shivanna: ಅಷ್ಟೆಲ್ಲಾ ವಿವಾದವಾದವರೂ ಕುಲದಲ್ಲಿ ಕೀಳ್ಯಾವುದೋ ನಿರ್ಮಾಪಕರಿಗೆ ಶಿವಣ್ಣ ಕಡೆಯಿಂದ ಫೋನ್

Madenur Manu

Krishnaveni K

ಬೆಂಗಳೂರು , ಶುಕ್ರವಾರ, 30 ಮೇ 2025 (11:57 IST)
ಬೆಂಗಳೂರು: ಮಡೆನೂರು ಮನು ಅಷ್ಟೆಲ್ಲಾ ಕೆಟ್ಟದಾಗಿ ಮಾತನಾಡಿದ ಅಡಿಯೋ ವೈರಲ್ ಆದ ಮೇಲೂ ಅವರ ಚೊಚ್ಚಲ ಸಿನಿಮಾ ಕುಲದಲ್ಲಿ ಕೀಳ್ಯಾವುದೋ ನಿರ್ಮಾಪಕರಿಗೆ ಶಿವಣ್ಣ ಕಡೆಯವರಿಂದ ಫೋನ್ ಬಂದಿತ್ತಂತೆ. ಅಷ್ಟಕ್ಕೂ ಅವರು ಹೇಳಿದ್ದೇನು ನೋಡಿ.

ರೇಪ್ ಕೇಸ್ ನಲ್ಲಿ ಅರೆಸ್ಟ್ ಆದ ಬಳಿಕ ಮಡೆನೂರು ಮನು ಅವರದ್ದು ಎನ್ನಲಾದ ಅಡಿಯೋ ಒಂದು ವೈರಲ್ ಆಗಿತ್ತು. ಈ ಅಡಿಯೋದಲ್ಲಿ ಶಿವಣ್ಣ ಇನ್ನೊಂದು ಆರು ವರ್ಷ ಸತ್ತೋಗ್ತಾರೆ ಎಂದು ಹೇಳಲಾಗಿದೆ. ಈ ಅಡಿಯೋ ವೈರಲ್ ಆಗುತ್ತಿದ್ದಂತೇ ಮಡೆನೂರು ಮನುಗೆ ಫಿಲಂ ಚೇಂಬರ್ ನಿಷೇಧ ಹೇರಿದೆ.

ಶಿವಣ್ಣ ಅಭಿಮಾನಿಗಳು ಚಿತ್ರದ ಬಗ್ಗೆಯೂ ರೊಚ್ಚಿಗೆದ್ದಿದ್ದರು. ಆದರೆ ಇದರಿಂದ ಸಿನಿಮಾಗೆ ಎಲ್ಲಿ ತೊಂದರೆಯಾಗುತ್ತದೋ, ತಾವು ಹಾಕಿದ ಪರಿಶ್ರಮ, ದುಡ್ಡು ಎಲ್ಲವೂ ವೇಸ್ಟ್ ಆಗುತ್ತದೆ ಎಂಬ ಚಿಂತೆಯಲ್ಲಿ ನಿರ್ಮಾಪಕರು ಸೇರಿದಂತೆ ಇಡೀ ಚಿತ್ರರಂಗವೇ ಇತ್ತು.

ಆದರೆ ಈ ವೇಳೆ ಶಿವಣ್ಣನವರ ಆಪ್ತರಿಂದ ಫೋನ್ ಕರೆ ಬಂದಿತ್ತು. ಚಿತ್ರದ ಕಟೌಟ್ ನಲ್ಲಿ ಮನು ಫೋಟೋ ತೆಗೆಯಿರಿ. ಅದು ಬಿಟ್ಟು ಸಿನಿಮಾ ಪ್ರಸಾರಕ್ಕೆ ತೊಂದರೆ ಕೊಡಲ್ಲ ಎಂದು ಭರವಸೆ ಸಿಕ್ಕಿತ್ತಂತೆ. ಹೀಗಾಗಿ ಸಿನಿಮಾ ನಿರಾತಂಕವಾಗಿ ಬಿಡುಗಡೆಯಾಯಿತು. ಇಲ್ಲದೇ ಹೋಗಿದ್ದರೆ ಸಿನಿಮಾ ಬಿಡುಗಡೆಯಾಗದೇ ನಮಗೆ ತುಂಬಾ ತೊಂದರೆಯಾಗುತ್ತಿತ್ತು ಎಂದು ನಿರ್ಮಾಪಕರು ಹೇಳಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

Kamal Hassan: ಕಮಲ್ ಹಾಸನ್ ವಿರುದ್ಧ ಪ್ರತಿಭಟನೆಗೆ ಕರ್ನಾಟಕ ಬಂದ್ ಅಂತೆ: ಸಾರ್ವಜನಿಕರಿಂದಲೇ ಟೀಕೆ