Select Your Language

Notifications

webdunia
webdunia
webdunia
webdunia

Kamal Hassan: ಕಮಲ್ ಹಾಸನ್ ವಿರುದ್ಧ ಪ್ರತಿಭಟನೆಗೆ ಕರ್ನಾಟಕ ಬಂದ್ ಅಂತೆ: ಸಾರ್ವಜನಿಕರಿಂದಲೇ ಟೀಕೆ

Kamal Hassan

Krishnaveni K

ಬೆಂಗಳೂರು , ಶುಕ್ರವಾರ, 30 ಮೇ 2025 (10:04 IST)
ಬೆಂಗಳೂರು: ಕನ್ನಡ ತಮಿಳಿನಿಂದ ಹುಟ್ಟಿದ್ದು ಎಂದು ವಿವಾದ ಸೃಷ್ಟಿಸಿರುವ ಬಹುಭಾಷಾ ನಟ ಕಮಲ್ ಹಾಸನ್ ವಿರುದ್ಧ ಆಕ್ರೋಶಗೊಂಡಿರುವ ಕನ್ನಡ ಪರ ಸಂಘಟನೆಗಳು ಸೋಮವಾರ ಕರ್ನಾಟಕ ಬಂದ್ ಗೆ ಕರೆ ನಿಡಿವೆ. ಆದರೆ ಇದಕ್ಕೆ ಸಾರ್ವಜನಿಕರಿಂದಲೇ ಆಕ್ರೋಶ ವ್ಯಕ್ತವಾಗಿದೆ.

ಥಗ್ಸ್ ಆಫ್ ಲೈಫ್ ಸಿನಿಮಾದಲ್ಲಿ ನಟ ಶಿವಣ್ಣ ಎದುರೇ ಕಮಲ್ ಹಾಸನ್ ಕನ್ನಡ ತಮಿಳಿನಿಂದ ಹುಟ್ಟಿದ್ದು ಎಂದಿದ್ದರು. ಅದು ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದೆ. ಕಮಲ್ ಹಾಸನ್ ಕ್ಷಮೆಗೆ ಆಗ್ರಹಿಸಿದ್ದಾರೆ. ಆದರೆ ಕಮಲ್ ಕ್ಷಮೆ ಕೇಳಲ್ಲ ಎಂದಿದ್ದಾರೆ.

ಇದರಿಂದ ಮತ್ತಷ್ಟು ರೊಚ್ಚಿಗೆದ್ದಿರುವ ಕನ್ನಡ ಪರ ಸಂಘಟನೆಗಳು ಸೋಮವಾರ ಬಂದ್ ಗೆ ಕರೆ ನೀಡಿವೆ. ಆದರೆ ಇದಕ್ಕೆ ಸಾರ್ವನಿಕರಿಂದಲೇ ಆಕ್ರೋಶ ವ್ಯಕ್ತವಾಗಿದೆ. ಇದಕ್ಕೆಲ್ಲಾ ಕರ್ನಾಟಕ ಬಂದ್ ಅವಶ್ಯಕತೆ ಇದೆಯಾ? ಇದರಿಂದ ಕಮಲ್ ಗೆ ಏನು ನಷ್ಟವಾಗುತ್ತದೆ ಎಂದಿದ್ದಾರೆ.

ಕರ್ನಾಟಕ ಬಂದ್ ಮಾಡುವುರಿಂದ ನಷ್ಟವಾಗುವುದು ನಮ್ಮ ರಾಜ್ಯದ ಜನರಿಗೇ. ಅಷ್ಟಕ್ಕೂ ಇದು ಕರ್ನಾಟಕ ಬಂದ್ ಮಾಡುವಂತಹ ವಿಚಾರವೇ? ಇಂತಹ ವಿಚಾರಕ್ಕೆಲ್ಲಾ ಬಂದ್ ಮಾಡುವುದರಲ್ಲಿ ಅರ್ಥವಿದೆಯಾ ಎಂದು ಸೋಷಿಯಲ್ ಮೀಡಿಯಾ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಮಲ್ ಹಾಸನ್ ಕನ್ನಡಿಗರ ಕ್ಷಮೆ ಕೇಳಲು ಗಡುವು: ಥಗ್ ಲೈಫ್ ಸಿನಿಮಾಕ್ಕೆ ರಾಜ್ಯದಲ್ಲಿ ಬ್ಯಾನ್‌ ಎಚ್ಚರಿಕೆ