Select Your Language

Notifications

webdunia
webdunia
webdunia
webdunia

ಲಾಯರ್ ಜಗದೀಶ್ ಗೆ ಕಿಚ್ಚ ಸುದೀಪ್ ಕಟಕಟೆಯಲ್ಲಿ ಕ್ಲಾಸ್: ವಿಡಿಯೋ

Lawyer Jagadish

Krishnaveni K

ಬೆಂಗಳೂರು , ಶನಿವಾರ, 5 ಅಕ್ಟೋಬರ್ 2024 (15:49 IST)
ಬೆಂಗಳೂರು: ಈ ವಾರವಿಡೀ ಮನೆಯವರಿಗೆ ಕಿರಿಕ್ ಮಾಡುತ್ತಿದ್ದ ಲಾಯರ್ ಜಗದೀಶ್ ಇಂದು ಕಿಚ್ಚನ ಕಟಕಟೆಯಲ್ಲಿ ನಿಲ್ಲಲಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಮಾಡಿದ ಕಿರಿಕ್ ಗಳಿಗೆ ಲಾಯರ್ ಜಗದೀಶ್ ಗೆ ಕಿಚ್ಚ ಸುದೀಪ್ ಚೆನ್ನಾಗಿ ಕ್ಲಾಸ್ ತೆಗೆದುಕೊಳ್ಳಲಿರುವುದು ಪಕ್ಕಾ ಆಗಿದೆ.

ಬಿಗ್ ಬಾಸ್ ಕನ್ನಡ ಸೀಸನ್ 11 ರ ಮೊದಲ ವಾರದ ಕತೆ ಕಿಚ್ಚನ ಜೊತೆ ಕಾರ್ಯಕ್ರಮ ಇಂದು ನಡೆಯಲಿದ್ದು, ಇದರ ಪ್ರೋಮೋವನ್ನು ವಾಹಿನಿ ಹರಿಯಬಿಟ್ಟಿದೆ. ಇದರಲ್ಲಿ ಬಿಗ್ ಬಾಸ್ ನಲ್ಲಿ ನಾನು ನಾನಾಗಿರ್ತೀನಿ ಎಂದು ಬಂದು ಏನು ಮಾಡ್ಬೇಕೂಂತ ಗೊತ್ತಾಗದೇ ಕಳೆದುಹೋಗಿರೋರನ್ನು ಪ್ರತೀ ಸೀಸನ್ ನಲ್ಲಿ ನೋಡಿದ್ದೀನಿ. ನನಗೆ ಬಿಗ್ ಬಾಸ್ ಬೇಕು ಅಂತ ಬಂದು ಬಿಗ್ ಬಾಸ್ ನ್ನೇ ಎಕ್ಸ್ ಪೋಸ್ ಮಾಡ್ತೀನಿ ಎಂದು ಒಬ್ಬರು ನಿರ್ಧಾರ ತೆಗೆದುಕೊಂಡು ನಿಂತಿದ್ದಾರೆ. ತಪ್ಪು ಯಾರು ಮಾಡಿದ್ದರು ಸರಿ ಯಾರು ಮಾಡಬೇಕಿತ್ತು’ ಎಂದು ಕಿಚ್ಚ ಖಡಕ್ ಆಗಿ ಹೇಳುವ ಪ್ರೋಮೋವನ್ನು ಹರಿಯಬಿಡಲಾಗಿದೆ.

ಇದನ್ನು ನೋಡಿದ ನೆಟ್ಟಿಗರು ಈವತ್ತು ವಾರದ ಕತೆ ಕಿಚ್ಚನ ಜೊತೆ ಅಲ್ಲ, ಲಾಯರ್ ಜಗದೀಶ್ ಜೊತೆ ಎಂದಿದ್ದಾರೆ. ಮತ್ತೆ ಕೆಲವರು ಇಷ್ಟು ದಿನ ನಾನೇ ಎಲ್ಲಾ ಎಂದು ಮೆರೆಯುತ್ತಿದ್ದ ಲಾಯರ್ ಜಗದೀಶ್ ಗೆ ಈವತ್ತು ಕಿಚ್ಚನ ಕೈಯಲ್ಲಿ ಚೆನ್ನಾಗಿ ಮಂಗಳಾರತಿ ಇದೆ ಎಂದು ತಮಾಷೆ ಮಾಡಿದ್ದಾರೆ.

ಬಿಗ್ ಬಾಸ್ ಗೆ ಬಂದ ಮೊದಲ ದಿನದಿಂದಲೂ ಲಾಯರ್ ಜಗದೀಶ್ ಮತ್ತು ಮನೆಯ ಇತರೆ ಸದಸ್ಯರ ಜೊತೆ ಕಿರಿಕ್ ಆಗುತ್ತಲೇ ಇದೆ. ಇದರ ನಡುವೆ ಬಿಗ್ ಬಾಸ್ ಗೇ ಅವರು ಧಮ್ಕಿ ಹಾಕಿದ್ದಾರೆ. ನನಗೆ ಏನು ಬೇಕಾದ್ರೂ ಮಾಡಬಹುದಾದ ಕೆಪಾಸಿಟಿ ಎಂದು ಕೊಚ್ಚಿಕೊಂಡಿದ್ದರು. ಆದರೆ ಇಂದು ಕಿಚ್ಚ ಈ ಎಲ್ಲಾ ಧಮ್ಕಿಗಳಿಗೆ ಉತ್ತರ ಕೊಡಲಿದ್ದಾರೆ ಎನ್ನುವುದು ಪ್ರೋಮೋ ನೋಡಿದರೇ ಅರಿವಾಗುತ್ತದೆ.


Share this Story:

Follow Webdunia kannada

ಮುಂದಿನ ಸುದ್ದಿ

‌ ಈ ಫೋಟೋಗಳನ್ನು ಚಿನ್ನುಮರಿಯ ಜಯಂತ್ ನೋಡಿದ್ರೆ ಏನ್ ಕಥೆ