Select Your Language

Notifications

webdunia
webdunia
webdunia
webdunia

‌ ಈ ಫೋಟೋಗಳನ್ನು ಚಿನ್ನುಮರಿಯ ಜಯಂತ್ ನೋಡಿದ್ರೆ ಏನ್ ಕಥೆ

‌ ಈ ಫೋಟೋಗಳನ್ನು ಚಿನ್ನುಮರಿಯ ಜಯಂತ್ ನೋಡಿದ್ರೆ ಏನ್ ಕಥೆ

Sampriya

ಬೆಂಗಳೂರು , ಶನಿವಾರ, 5 ಅಕ್ಟೋಬರ್ 2024 (15:33 IST)
Photo Courtesy X
ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಸೀರಿಯಲ್‌ನ ಜಯಂತ್‌ಗೆ ತನ್ನ ಚಿನ್ನುಮರಿಯನ್ನು ಯಾರು ಮುದ್ದು ಮಾಡಬಾರದು, ಆಕೆ ಪ್ರತಿ ಕ್ಷಣವೂ ತನ್ನ ಬಗ್ಗೆಯಷ್ಟೇ ಯೋಚಿಸುತ್ತಿರಬೇಕು ಎಂಬ ಮಹಾದಾಸೆ. ಮನೆಯೊಳಗೆ ತಾನು ಬೆಳೆಸಿದ ಗಿಡಗಳ ಜತೆ ಮಾತನಾಡುತ್ತಾ, ಅಡುಗೆ ಮಾಡುತ್ತಿರಬೇಕು.  ಹಾಗಾಗಿ ತನ್ನ ಆಸೆಯಂತೆಯೇ ಜಾಹ್ನವಿಯನ್ನು ಮನೆಯೊಳಗೆ ಬಂಧಿಸಿದ್ದಾನೆ. ಇನ್ನೂ ಈ ಜಯಂತ್‌ನ ಸೈಕೋ ಬುದ್ಧಿಗೆ ಪ್ರೇಕ್ಷಕರು ಸುಸ್ತಾಗಿದ್ದಾರೆ. ‌ಜಾಹ್ನವಿ ಅದೇಗೆ ಜಯಂತ್ ಜತೆ ಬದುಕುತ್ತಿದ್ದಾಳೆ ಎಂಬ ಪ್ರಶ್ನೆ ಮಾಡುತ್ತಿದ್ದಾರೆ.

ಇನ್ನೂ ಜಾಹ್ನವಿ ಏನಾದರೂ ತನ್ನ ಕಣ್ಣು ತಪ್ಪಿಸಿ ಅಪ್ಪಿ ತಪ್ಪಿ ಏನಾದರೂ ಯಡವಟ್ಟು ಮಾಡಿದರೆ ಅಷ್ಟೇ ಕತೆ. ಬಂಗಾರದ ಪಂಜರದಂತೆ ಬದುಕುತ್ತಿರುವ ಜಾಹ್ನವಿ ಮನೆಗೆ ಆಕೆಯ ಸ್ನೇಹಿತ ಈಚೆಗೆ ಕದ್ದು ಸೇರಿದ್ದ. ಜಯಂತ್ ಅವನನ್ನು ನೋಡಿ ಕೆಂಡಾಮಂಡಲವಾಗಿದ್ದಾನೆ. ಇದನ್ನು ನೋಡಿದ ಪ್ರೇಕ್ಷಕರು ಟ್ರೋಲ್ ಮಾಡುತ್ತಿದ್ದಾರೆ.

 ಇದೀಗ ಚಂದನಾ ಅವರು ಈ ಹಿಂದೆ ಅಭಿನಯಿಸಿದ ಹೂ ಮಳೆ ಸೀರಿಯಲ್‌ನ ಎಂಡಿಗ್ ಸೀನ್ ನೋಡಿದರೆ ಜಯಂತ್ ಕಥೆ ಏನ್ ಎಂದು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡುತ್ತಿದ್ದಾರೆ.  ಟ್ರೋಲ್ ಆಗುತ್ತಿರುವ ಪೋಟೋದಲ್ಲಿ ಚಂದನಾ ತನ್ನ ಇಬ್ಬರು ಮಕ್ಕಳ ಜತೆ ಗಂಡನ ಹೆಗಲ ಮೇಲೆ ಮಲಗಿದ್ದಾಳೆ. ಮತ್ತೊಂದು ಫೋಟೋದಲ್ಲಿ ಚಂದನಾ ಇಬ್ಬರು ಗೆಳೆಯರ ಜತೆ ಕೂತಿದ್ದಾಳೆ.

ಈ ಫೋಟೋಗಳನ್ನು ಚಿನ್ನುಮರಿಯ ಜಯಂತ್ ನೋಡಿದ್ರೆ ಏನ್ ಕಥೆ ಎಂದಿದ್ದಾರೆ. ಜಾಹ್ನವಿ-ಜಯಂತ್ ಸಂಸಾರದಲ್ಲಿ ಬಿರುಗಾಳಿಗೆ ಕಾರಣವಾಗುತ್ತಾ ಈ ಫೋಟೋಗಳು ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರೇಣುಕಾಸ್ವಾಮಿ ರಕ್ತದ ಕಲೆ ಅಲ್ಲಿರಲಿಲ್ಲ, ಇಲ್ಲಿ ಹೇಗೆ ಬಂತು: ಸಿವಿ ನಾಗೇಶ್ ವಾದ ವೈಖರಿಗೆ ದರ್ಶನ್ ಖುಷ್