Select Your Language

Notifications

webdunia
webdunia
webdunia
webdunia

BBK11: ಹುಡುಗಿಯರ ಒಳಉಡುಪಿನ ಬಗ್ಗೆ ಕಾಮೆಂಟ್ ಮಾಡಿದ ಲಾಯರ್ ಜಗದೀಶ್

Lawyer Jagadish

Krishnaveni K

ಬೆಂಗಳೂರು , ಶನಿವಾರ, 5 ಅಕ್ಟೋಬರ್ 2024 (13:58 IST)
Photo Credit: X
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಸ್ಪರ್ಧಿಯಾಗಿರುವ ಲಾಯರ್ ಜಗದೀಶ್ ಮನೆಯಲ್ಲಿ ಅನಗತ್ಯವಾಗಿ ಕಲಹಕ್ಕೆ ಕಾರಣವಾಗುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ಇದರ ಜೊತೆಗೆ ಈಗ ಹುಡುಗಿಯರ ಒಳಉಡುಪಿನ ಬಗ್ಗೆ ಮಾತನಾಡಿ ಮತ್ತೆ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಬಿಗ್ ಬಾಸ್ ನಲ್ಲಿ ಟಾಸ್ಕ್ ಸಂದರ್ಭದಲ್ಲಿ ಒಬ್ಬರಿಗೊಬ್ಬರು ಕಿತ್ತಾಡುವುದು ಸಹಜ. ಆದರೆ ಈ ಬಾರಿ ಮೊದಲ ದಿನದಿಂದಲೇ ಕಿತ್ತಾಟವಾಗುತ್ತಿದೆ. ಇದಕ್ಕೆ ಕಾರಣ ಲಾಯರ್ ಜಗದೀಶ್. ಒಂದಲ್ಲಾ ಒಂದು ಕಾರಣಕ್ಕೆ ಬೇರೆಯವರ ಮೇಲೆ ಸವಾರಿ ಮಾಡುತ್ತಿದ್ದಾರೆ. ಈಗಾಗಲೇ ಬಿಗ್ ಬಾಸ್ ಬಗ್ಗೆಯೂ ಕೀಳಾಗಿ ಕಾಮೆಂಟ್ ಮಾಡಿದ್ದರು. ಬಳಿಕ ಕ್ಷಮೆಯನ್ನೂ ಕೇಳಿದ್ದರು.

ನಿನ್ನೆ ಕ್ಯಾಪ್ಟನ್ಸಿ ಟಾಸ್ಕ್ ಗೆ ಸ್ಪರ್ಧಿಗಳನ್ನು ಆಯ್ಕೆ ಮಾಡಲು ಹೊರಟಾಗ ಮನೆಯವರೆಲ್ಲರೂ ಓಟ್ ಮೂಲಕ ಆಯ್ಕೆ ಮಾಡೋಣ ಎಂದರೆ ಲಾಯರ್ ಜಗದೀಶ್ ಮಾತ್ರ ಇದು ಅನ್ಯಾಯ, ಎಲ್ಲಾ ನಿಮ್ಮದೇ ತೀರ್ಮಾನ ತೆಗೆದುಕೊಳ್ತೀರಿ ಎಂದು ಅನಗತ್ಯವಾಗಿ ವಿವಾದ ಶುರು ಮಾಡಿದರು.

ಈ ವೇಳೆ ಉಗ್ರಂ ಮಂಜು ಮೇಲೆ ಹರಿಹಾಯ್ದರು. ನಿನ್ನ ನವರಂಗಿ ಆಟ ಎಲ್ಲಾ ನನ್ನ ಬಳಿ ಆಡಬೇಡ. ನನಗೂ ಆಡಕ್ಕೆ ಗೊತ್ತು, ನಿನ್ನ ಹಾಗೆ ಗುಂಪು ಕಟ್ಟಕ್ಕೆ ನನಗೂ ಬರುತ್ತೆ ಎಂದೆಲ್ಲಾ ಜಗಳಕ್ಕೆ ಹೋದರು. ಆದರೆ ಉಗ್ರಂ ಮಂಜು ಸೀಟ್ ನಲ್ಲಿ ಕಾಲ ಮೇಲೆ ಕಾಲು ಹಾಕಿ ಕುಳಿತು ಬ್ರೋ ಬ್ರೋ ಎಂದಿದ್ದು ಬಿಟ್ಟರೆ ಏನೂ ಉತ್ತರ ಕೊಡಲು ಹೋಗಲಿಲ್ಲ.

ಅವರು ಬ್ರೋ ಬ್ರೋ ಎಂದಿದ್ದಕ್ಕೆ ಲಾಯರ್ ಜಗದೀಶ್ ಬ್ರೋ, ಪ್ಯಾಂಟೀಸ್ ಎಲ್ಲಾ ನನಗೂ ಗೊತ್ತು. ನನ್ನ ಹೆಂಡತಿನೂ ಇದನ್ನೇ ಹಾಕೋದು ಎಂದರು. ಅವರ ಈ ಅಶ್ಲೀಲ ಕಾಮೆಂಟ್ ಅಲ್ಲಿದ್ದ ಹೆಣ್ಣು ಮಕ್ಕಳಿಗೂ ಮುಜುಗರ ತಂದಿತ್ತು. ಬಳಿಕ ಭವ್ಯಾ ಕ್ಯಾಮರಾ ಮುಂದೆ ಬಂದು ಅವರ ಮಾತುಗಳು ನಮಗೆ ಮುಜುಗರ, ಕಿರಿ ಕಿರಿ ತರುತ್ತಿದೆ. ಅನಗತ್ಯವಾಗಿ ಜಗಳಕ್ಕೆ ಬರುತ್ತಿದ್ದಾರೆ. ದಯವಿಟ್ಟು ನೀವೇ ಏನಾದ್ರೂ ಮಾಡಿ ಬಿಗ್ ಬಾಸ್ ಎಂದು ಮನವಿ ಮಾಡಿದ್ದಾರೆ. ಇಂದು ವಾರದ ಕತೆ ಕಿಚ್ಚನ ಜೊತೆ ಕಾರ್ಯಕ್ರಮವಿದ್ದು, ಅವರು ಈ ವಿಚಾರಗಳಿಗೆ ಯಾವ ರೀತಿ ಕ್ಲಾಸ್ ತೆಗೆದುಕೊಳ್ಳುತ್ತಾರೆ ಎಂದು ನೋಡಲು ವೀಕ್ಷಕರು ಕಾಯ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸದ್ದಿಲ್ಲದೇ ನಿಶ್ಚಿತಾರ್ಥ ಮಾಡಿಕೊಂಡ ಬಿಗ್ ಬಾಸ್ ಮಂಜು ಪಾವಗಡ