Select Your Language

Notifications

webdunia
webdunia
webdunia
webdunia

ಟ್ವೀಟ್ ನಲ್ಲಿ ತಪ್ಪು ಮಾಡಿ ಡಿಲೀಟ್ ಮಾಡಿದ ಕಿಚ್ಚ ಸುದೀಪ್: ಕಿಚಾಯಿಸಿದ ದರ್ಶನ್ ಅಭಿಮಾನಿಗಳು

ಟ್ವೀಟ್ ನಲ್ಲಿ ತಪ್ಪು ಮಾಡಿ ಡಿಲೀಟ್ ಮಾಡಿದ ಕಿಚ್ಚ ಸುದೀಪ್: ಕಿಚಾಯಿಸಿದ ದರ್ಶನ್ ಅಭಿಮಾನಿಗಳು
ಬೆಂಗಳೂರು , ಮಂಗಳವಾರ, 5 ಮೇ 2020 (09:50 IST)
ಬೆಂಗಳೂರು: ಕಿಚ್ಚ ಸುದೀಪ್ ಮತ್ತು ದರ್ಶನ್ ಅಭಿಮಾನಿಗಳ ನಡುವೆ ಆಗಾಗ ಸಾಮಾಜಿಕ ಜಾಲತಾಣದಲ್ಲಿ ಗುದ್ದಾಟ ನಡೆಯುತ್ತಲೇ ಇರುತ್ತವೆ. ಇದೀಗ ಮತ್ತೆ ಇಬ್ಬರ ಅಭಿಮಾನಿಗಳ ನಡುವೆ ಕೆಸರೆರಚಾಟ ನಡೆದಿದೆ.


ಇದಕ್ಕೆ ಕಾರಣವಾಗಿದ್ದು ನಿತ್ಯೋತ್ಸವ ಕವಿ ಕೆಎಸ್ ನಿಸಾರ್ ಅಹಮ್ಮದ್ ಅವರಿಗೆ ಕಿಚ್ಚ ಶ್ರದ್ಧಾಂಜಲಿ ಅರ್ಪಿಸಿ ಮಾಡಿದ ಒಂದು ಟ್ವೀಟ್. ಆ ಟ್ವೀಟ್ ನಲ್ಲಿ ಕಿಚ್ಚ ಕನ್ನಡದಲ್ಲಿ ಬರೆಯುವಾಗ ಕೆಲವೊಂದು ತಪ್ಪು ಮಾಡಿದ್ದರು. ಇದನ್ನು ದರ್ಶನ್ ಅಭಿಮಾನಿಗಳು ಗಮನಿಸಿ ಟ್ರೋಲ್ ಮಾಡಿದ್ದರು.

ತಕ್ಷಣವೇ ಟ್ವೀಟ್ ಡಿಲೀಟ್ ಮಾಡಿದ್ದ ಕಿಚ್ಚ ಹೊಸದಾಗಿ ಕನ್ನಡದಲ್ಲಿ ಸಂದೇಶ ಬರೆದಿದ್ದರು. ಇದಕ್ಕೆ ಮತ್ತಷ್ಟು ಕಿಚ್ಚನ ಕಾಲೆಳೆದಿರುವ ದರ್ಶನ್ ಅಭಿಮಾನಿಗಳು ಮೊದಲು ಕನ್ನಡ ಸರಿಯಾಗಿ ಬರೆಯಲು ಕಲಿಯಿರಿ ಎಂದು ತಮಾಷೆ ಮಾಡಿದ್ದಾರೆ. ಇದಕ್ಕೆ ತಿರುಗೇಟು ಕೊಟ್ಟಿರುವ ಕಿಚ್ಚನ ಅಭಿಮಾನಿಗಳು ದರ್ಶನ್ ಹಿಂದೊಮ್ಮೆ ಇಂಗ್ಲಿಷ್ ನಲ್ಲಿ ಟ್ವೀಟ್ ಮಾಡುವಾಗ ಮಾಡಿದ್ದ ವ್ಯಾಕರಣ ತಪ್ಪನ್ನು ಎತ್ತಿ ತೋರಿಸಿ ನಿಮ್ಮ ಬಾಸ್ ಗೆ ಸರಿಯಾಗಿರಲು ಹೇಳಿ ಎಂದಿದ್ದಾರೆ. ಈ ರೀತಿ ಕಿಚ್ಚ ಮಾಡಿದ ಒಂದು ಟ್ವೀಟ್ ಅಭಿಮಾನಿಗಳಲ್ಲಿ ಕೆಸರೆರಚಾಟಕ್ಕೆ ಕಾರಣವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿವಾದ ತಣ್ಣಗಾದ ಬಳಿಕ ಮತ್ತೆ ಡಬ್ಬಿಂಗ್ ಧಾರವಾಹಿ ಪ್ರಸಾರ ಮಾಡಲಿರುವ ಕನ್ನಡ ವಾಹಿನಿ