Select Your Language

Notifications

webdunia
webdunia
webdunia
webdunia

ನಟಿ ಮೀನಾ ಪತಿ ಸಾವಿನ ಕುರಿತು ಸ್ಪಷ್ಟನೆ ನೀಡಿದ ನಟಿ ಖುಷ್ಬೂ

ನಟಿ ಮೀನಾ ಪತಿ ಸಾವಿನ ಕುರಿತು ಸ್ಪಷ್ಟನೆ ನೀಡಿದ ನಟಿ ಖುಷ್ಬೂ
ಚೆನ್ನೈ , ಶುಕ್ರವಾರ, 1 ಜುಲೈ 2022 (10:40 IST)
ಚೆನ್ನೈ: ಇತ್ತೀಚೆಗೆ ನಿಧನರಾಗಿದ್ದ ನಟಿ ಮೀನಾ ಪತಿ ವಿದ್ಯಾಸಾಗರ್ ಸಾವಿನ ಕುರಿತಂತೆ ಹರಡುತ್ತಿರುವ ವದಂತಿಗಳ ಬಗ್ಗೆ ನಟಿ, ಮೀನಾ ಗೆಳತಿ ಖುಷ್ಬೂ ಸುಂದರ್ ಸ್ಪಷ್ಟನೆ ಕೊಟ್ಟಿದ್ದಾರೆ.

ವಿದ್ಯಾಸಾಗರ್ ಸಾವಿಗೆ ಕೊರೋನಾ ಕಾರಣ ಎಂದು ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಸುದ್ದಿಗೆ ಖುಷ್ಬೂ ಸ್ಪಷ್ಟನೆ ಕೊಟ್ಟಿದ್ದಾರೆ. ಜೊತೆಗೆ ಮೀನಾ ಕುಟುಂಬದ ಬಗ್ಗೆ ಕೊಂಚ ದಯೆ ಇರಲಿ ಎಂದು ಮನವಿ ಮಾಡಿದ್ದಾರೆ.

‘ಮೀನಾ ಮತ್ತು ವಿದ್ಯಾಸಾಗರ್ ಕುಟುಂಬಕ್ಕೆ ಕೊರೋನಾ ಬಂದಿದ್ದು ಮೂರು ತಿಂಗಳ ಹಿಂದೆ. ಹೀಗಾಗಿ ಮಾಧ‍್ಯಮಗಳಲ್ಲಿ ಮನವಿ ಮಾಡುತ್ತಿದ್ದೇನೆ, ದಯವಿಟ್ಟು ಸಾಗರ್ ಸಾವಿಗೆ ಕೊರೋನಾ ಕಾರಣ ಎನ್ನಬೇಡಿ. ಇತ್ತೀಚೆಗೆ ಅವರಿಗೆ ಶ್ವಾಸಕೋಶದ ಸೋಂಕು ಕಾಣಿಸಿಕೊಂಡಿದೆ. ಖಂಡಿತಾ ಕೊರೋನಾ ಬಗ್ಗೆ ನಾವು ಜಾಗರೂಕರಾಗಿರಬೇಕು. ಆದರೆ ಇಲ್ಲಿ ಸಾವಿಗೆ ಅದೇ ಕಾರಣವಲ್ಲ. ಅವರ ಕುಟುಂಬದ ಬಗ್ಗೆ ಇಲ್ಲಸಲ್ಲದ ಸುದ್ದಿ ಪ್ರಕಟಿಸಿ ನೋವು ಕೊಡಬೇಡಿ’ ಎಂದು ಮನವಿ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಒಂದೇ ಒಂದು ಡ್ಯಾನ್ಸ್ ನಿಂದ ಬಾಲಿವುಡ್ ನಲ್ಲಿ ಬಿಗ್ ಆಫರ್ ಪಡೆದ ರಶ್ಮಿಕಾ ಮಂದಣ್ಣ