Select Your Language

Notifications

webdunia
webdunia
webdunia
webdunia

ಎಸ್ ಪಿಬಿಗೆ ಭಾರತ ರತ್ನ: ಆಂಧ್ರ ಸಿಎಂಗೆ ನಟ ಕಮಲ್ ಹಾಸನ್ ಬೆಂಬಲ

ಎಸ್ ಪಿಬಿಗೆ ಭಾರತ ರತ್ನ: ಆಂಧ್ರ ಸಿಎಂಗೆ ನಟ ಕಮಲ್ ಹಾಸನ್ ಬೆಂಬಲ
ಹೈದರಾಬಾದ್ , ಮಂಗಳವಾರ, 29 ಸೆಪ್ಟಂಬರ್ 2020 (12:26 IST)
ಹೈದರಾಬಾದ್: ಇತ್ತೀಚೆಗಷ್ಟೇ ನಿಧನರಾದ ಖ್ಯಾತ ಗಾಯಕ ಎಸ್ ಪಿ ಬಾಲಸುಬ್ರಮಣ್ಯಂ ಸಾಧನೆ ಗುರುತಿಸಿ ಅವರಿಗೆ ಭಾರತ ರತ್ನ ನೀಡಬೇಕು ಎಂದು ಆಂಧ್ರ ಸಿಎಂ ಜಗಮೋಹನ್ ರೆಡ್ಡಿ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದರು. ಇದೀಗ ಕಮಲ್ ಹಾಸನ್ ಕೂಡಾ ಇದನ್ನು ಬೆಂಬಲಿಸಿದ್ದಾರೆ.


ಆಂಧ‍್ರ ಸಿಎಂ ಇಂತಹದ್ದೊಂದು ಬೇಡಿಕೆ ಮಂಡಿಸಿರುವುದನ್ನು ಸ್ವಾಗತಿಸಿರುವ ಕಮಲ್ ಹಾಸನ್ ಇದು ಕೇವಲ ತಮಿಳುನಾಡಿನ ಅವರ ಅಭಿಮಾನಿಗಳಿಗೆ ಮಾತ್ರವಲ್ಲ, ದೇಶದ ಎಲ್ಲಾ ಅಭಿಮಾನಿಗಳಿಗೂ ಖುಷಿಯಾಗುತ್ತದೆ ಎಂದಿದ್ದಾರೆ. ಭಾರತದ ಸಿನಿಮಾ ಸಂಗೀತ ಕ್ಷೇತ್ರಕ್ಕೆ ಎಸ್ ಪಿ ಬಾಲಸುಬ್ರಮಣ್ಯಂ ನೀಡಿರುವ ಅನನ್ಯ ಕೊಡುಗೆ ಪರಿಗಣಿಸಿ ಅವರಿಗೆ ಭಾರತ ರತ್ನ ನೀಡಬೇಕೆಂದು ಜಗನ್ ಮೋದಿಗೆ ಪತ್ರ ಬರೆದಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನಿಂದ ಜೈಲ್ ನಲ್ಲಿ ಸಂಜನಾ-ರಾಗಿಣಿಗೆ ಸ್ಪೆಷಲ್ ಟ್ರೀಟ್ ಮೆಂಟ್ ಎಲ್ಲಾ ರದ್ದು