Select Your Language

Notifications

webdunia
webdunia
webdunia
webdunia

ಮುಖ್ಯಂತ್ರಿ ಕುಮಾರಸ್ವಾಮಿಗೆ ಹೊಸ ಬೇಡಿಕೆಯಿಟ್ಟ ನವರಸನಾಯಕ ಜಗ್ಗೇಶ್

ಮುಖ್ಯಂತ್ರಿ ಕುಮಾರಸ್ವಾಮಿಗೆ ಹೊಸ ಬೇಡಿಕೆಯಿಟ್ಟ ನವರಸನಾಯಕ ಜಗ್ಗೇಶ್
ಬೆಂಗಳೂರು , ಮಂಗಳವಾರ, 5 ಫೆಬ್ರವರಿ 2019 (10:14 IST)
ಬೆಂಗಳೂರು: ರೈತರ ಸಾಲಮನ್ನಾ ಆಯ್ತು. ಇದೀಗ ಬಡ ಮಕ್ಕಳ ಓದಿಗೆ ಸಹಾಯವಾಗಲು ವಿದ್ಯಾಸಾಲಮನ್ನಾ ಮಾಡಬೇಕು ಎಂದು ನವರಸನಾಯಕ ಜಗ್ಗೇಶ್ ಒತ್ತಾಯಿಸಿದ್ದಾರೆ.


ಬಡ ಮಕ್ಕಳು ಎಷ್ಟೋ ಜನ ವಿದ್ಯಾಭ್ಯಾಸಕ್ಕಾಗಿ ಸಾಲ ಮಾಡಿ ತೀರಿಸಲಾಗದೇ ಒದ್ದಾಡುತ್ತಿರುತ್ತಾರೆ. ಅಂತಹವರ ಸಾಲಮನ್ನಾ ಮಾಡಲು ಯೋಜನೆ ಕೈಗೊಳ್ಳಿ ಎಂದು ಜಗ್ಗೇಶ್ ಸಿಎಂ ಕುಮಾರಸ್ವಾಮಿಗೆ ಟ್ವಿಟರ್ ಮೂಲಕ ಮನವಿ ಮಾಡಿದ್ದಾರೆ.

ಸಿನಿಮಾ ನಟರ ಪರ ಪ್ರಚಾರ ಪಕ್ಕಕ್ಕಿಟ್ಟು ಬಡ ಮಕ್ಕಳ ವಿದ್ಯಾರ್ಥಿಗಳ ಸಾಲಮನ್ನಾ ಮಾಡಲು ಮುಖ್ಯಮಂತ್ರಿಗಳಿಗೆ ಒತ್ತಾಯ ಮಾಡಿ ಎಂದು ತಮ್ಮ ಅಭಿಮಾನಿಗಳಿಗೂ ಮನವಿ ಮಾಡಿದ್ದಾರೆ.

ಜಗ್ಗೇಶ್ ಈ ರೀತಿ ಬರೆದುಕೊಳ್ಳುತ್ತಿದ್ದಂತೆ ಯಾರೋ ಅವರಿಗೆ ನೀವು ಬಡಮಕ್ಕಳಿಗಾಗಿ ಏನು ಮಾಡಿದ್ದೀರಿ ಎಂದು ಕೇಳಿದ್ದಾರೆ. ಇದಕ್ಕೆ ಜಗ್ಗೇಶ್ ತಾವು ಪ್ರತಿವರ್ಷ 10 ಬಡಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗುತ್ತಿರುವುದಾಗಿ ಹೇಳಿದ್ದಾರೆ. ಅಷ್ಟೇ ಅಲ್ಲದೆ, ತಮ್ಮ ನೆರವಿನಿಂದ ಓದಿದ ಕೆಲವರು ಇಂದು ಪದವಿ ಮುಗಿಸಿರುವ ಬಗ್ಗೆ ಹೆಮ್ಮೆಯಿಂದಲೇ ಬರೆದುಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಸಂಜೆ 5 ಗಂಟೆಗೆ ಡಿ ಬಾಸ್ ದರ್ಶನ್ ಅಭಿಮಾನಿಗಳಿಗೆ ಹಬ್ಬ