Publish Date: Mon, 04 Feb 2019 (06:55 IST)
Updated Date: Mon, 04 Feb 2019 (06:57 IST)
ದಾವಣಗೆರೆ : ಸಿದ್ದರಾಮಯ್ಯರನ್ನು ಹುಚ್ಚ ಎಂದು ಕೆ.ಎಸ್. ಈಶ್ವರಪ್ಪ ಅವರು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ.
ಪ್ರಕೃತಿ ಚಿಕಿತ್ಸಾಲಯದಲ್ಲಿ ಚುನಾವಣೆಗೆ ನಿಲ್ಲಲ್ಲ ಅಂತಾರೆ. ಆದರೆ ಅಲ್ಲಿಂದ ಹೊರಬಂದು ಮುಂದಿನ ಸಿಎಂ ನಾನೇ ಅಂತಾರೆ. ಹಾಗಾಗಿ ಸಿದ್ದರಾಮಯ್ಯರನ್ನು ಹುಚ್ಚಾ ಅನ್ಬೇಕಾ ಮತ್ತೇನು ಅನ್ನಬೇಕು ಎಂದು ಈಶ್ವರಪ್ಪ ಅವರು ಹೇಳಿದ್ದಾರೆ.
‘ಸಿಎಂ ಕುಮಾರಸ್ವಾಮಿ ಅವರು ರಾಜೀನಾಮೆ ಹೇಳಿಕೆ ಬೂಟಾಟಿಕೆ. ಕುತ್ತಿಗೆ ಹಿಡಿದು ತಳ್ಳಿದರೂ ಕುಮಾರಸ್ವಾಮಿ ರಾಜೀನಾಮೆ ಕೊಡಲ್ಲ. ನಿಮ್ಮ ಗೊಂದಲದಿಂದ ಸ್ವಾಭಾವಿಕವಾಗಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಸಿದ್ದರಾಮಯ್ಯ ಖರ್ಗೆ ಪರಮೇಶ್ವರ್ ಗುಂಪುಗಳು ಬಡಿದಾಡಿಕೊಂಡು ಸರ್ಕಾರ ಕೆಡವುತ್ತಾರೆ’ ಎಂದು ಅವರು ವ್ಯಂಗ್ಯವಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.