Select Your Language

Notifications

webdunia
webdunia
webdunia
webdunia

ಸರಿಗಮಪ ಕಾರ್ಯಕ್ರಮದ ಅಂಧ ಗಾಯಕಿಯರಿಗೆ ಸೂರು ಕಟ್ಟಿಕೊಡಲಿರುವ ನಟ ಜಗ್ಗೇಶ್

ಸರಿಗಮಪ ಕಾರ್ಯಕ್ರಮದ ಅಂಧ ಗಾಯಕಿಯರಿಗೆ ಸೂರು ಕಟ್ಟಿಕೊಡಲಿರುವ ನಟ ಜಗ್ಗೇಶ್
ಬೆಂಗಳೂರು , ಮಂಗಳವಾರ, 11 ಫೆಬ್ರವರಿ 2020 (11:36 IST)
ಬೆಂಗಳೂರು: ಜೀ ಕನ್ನಡ ವಾಹಿನಿಯ ಸರಿಗಮಪ ಹಾಡಿನ ಶೋಗೆ ಬಂದಿದ್ದ ತುಮಕೂರಿನ ಇಬ್ಬರು ಅಂಧ ಅವಳಿ ಸಹೋದರಿಯರ ಸ್ಥಿತಿ ಕಂಡು ಎಲ್ಲರೂ ಮರುಗಿದ್ದರು.


ಈ ಕಾರ್ಯಕ್ರಮದಲ್ಲಿ ತಮ್ಮ ಬಡತನದ ಬಗ್ಗೆ ಹೇಳಿಕೊಂಡಿದ್ದ ಸಹೋದರಿಯರನ್ನು ನೋಡಿ ಎಲ್ಲರೂ ಕಣ್ಣೀರು ಮಿಡಿದಿದ್ದರು. ವೇದಿಕೆಯಲ್ಲೇ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಇನ್ನು ಮುಂದೆ ನಿಮಗೆ ತಿಂಗಳ ದಿನಸಿ ವ್ಯವಸ್ಥೆ ನನ್ನ ಕಡೆಯಿಂದ ಆಗುತ್ತದೆ ಎಂದು ಭರವಸೆ ಕೊಟ್ಟಿದ್ದರು.

ಇದೀಗ ಈ ಅವಳಿ ಸಹೋದರಿಯರಿಗೆ ಮನೆ ಕಟ್ಟಿಸಿಕೊಡಲು ನವರಸನಾಯಕ ಜಗ್ಗೇಶ್ ಮುಂದೆ ಬಂದಿದ್ದಾರೆ.  ಈ ಸಹೋದರಿಯರ ಸ್ಥಿತಿ ಕಂಡು ಭಾವುಕನಾದೆ. ತಡಮಾಡದೇ ಇವರಿಗೆ ಸೂರು ಕಲ್ಪಿಸಿಕೊಡಲು ಕೊರಟಗೆರೆ ಜಗ್ಗೇಶ್ ಅಭಿಮಾನಿಗಳ ಸಂಘದ ಫ್ರೆಂಡ್ಸ್ ಗ್ರೂಪ್ ಗೆ ಜವಾಬ್ಧಾರಿ ನೀಡಿರುವೆ ಎಂದು ಜಗ್ಗೇಶ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಜಗ್ಗೇಶ್ ರ ಈ ಮಾನವೀಯ ಕಾರ್ಯಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಮಿಡಿ ಕಿಲಾಡಿಗಳು ವೇದಿಕೆಗೆ ಹೋಂ ಮಿನಿಸ್ಟರ್ ಗಳು! ವೇದಿಕೆಯಲ್ಲೇ ಪತ್ನಿಗೆ ಕಿಸ್ ಕೊಟ್ಟ ಜಗ್ಗೇಶ್!