Select Your Language

Notifications

webdunia
webdunia
webdunia
webdunia

ಪರಿಹಾರ ಹಣ ನುಂಗುವ ಅಧಿಕಾರಿಗಳ ಸುಮ್ನೇ ಬಿಡಬೇಡಿ: ನಟ ಜಗ್ಗೇಶ್ ಎಚ್ಚರಿಕೆ

ಪರಿಹಾರ ಹಣ ನುಂಗುವ ಅಧಿಕಾರಿಗಳ ಸುಮ್ನೇ ಬಿಡಬೇಡಿ: ನಟ ಜಗ್ಗೇಶ್ ಎಚ್ಚರಿಕೆ
ಬೆಂಗಳೂರು , ಶನಿವಾರ, 12 ಅಕ್ಟೋಬರ್ 2019 (09:39 IST)
ಬೆಂಗಳೂರು: ನೆರೆ ಪರಿಹಾರ ಕೇಳಲು ಹೋದರೆ ಲಂಚ ಕೇಳುವುದು, ಅಲೆದಾಡಿಸುವುದು ಮಾಡುವ ಅಧಿಕಾರಿಗಳನ್ನು ಸುಮ್ಮನೇ ಬಿಡಬೇಡಿ. ಸರಿಯಾಗಿ ಬುದ್ಧಿ ಕಲಿಸಿ ಎಂದು ನಟ, ಬಿಜೆಪಿ ನಾಯಕ ಜಗ್ಗೇಶ್ ಟ್ವಿಟರ್ ಮೂಲಕ ಎಚ್ಚರಿಕೆ ನೀಡಿದ್ದಾರೆ.


ಅಧಿಕಾರಿಗಳನ್ನು ಭೇಟಿ ಮಾಡಲು ಹೋಗುವಾಗ ಕೈಯಲ್ಲಿ ಮೊಬೈಲ್ ಕೊಂಡೊಯ್ಯಲು ಮರೆಯಬೇಡಿ. ಒಂದು ವೇಳೆ ಅಧಿಕಾರಿಗಳು ಲಂಚ ಕೇಳಿದರೆ ಮೊಬೈಲ್ ನಲ್ಲಿ ವಿಡಿಯೋ ರೆಕಾರ್ಡ್ ಮಾಡಿ ಎಂದು ಜಗ್ಗೇಶ್ ಹೇಳಿದ್ದಾರೆ.

‘ಮೊಬೈಲ್ ನಲ್ಲಿ ಅಧಿಕಾರಿಗಳ ಜತೆ ನೆರೆ ಪರಿಹಾರದ ಕುರಿತು ನಡೆಸುವ ಮಾತುಕತೆ ರೆಕಾರ್ಡ್ ಮಾಡಿ. ಇದು ನೊಂದವರಿಗೆ ಉಪಯೋಗಕ್ಕೆ ಬರುತ್ತದೆ. ನೊಂದವರ ಪರಿಹಾರ ಕಬಳಿಸುವವರ ಬಗ್ಗೆ ಎಚ್ಚರ! ಸರ್ವನಾಶವಾಗುತ್ತೀರಿ ನೊಂದವರ ಹಣ ನುಂಗಿದರೆ’ ಎಂದು ಜಗ್ಗೇಶ್ ಎಚ್ಚರಿಕೆ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನಿಂದ ಜೀ ವಾಹಿನಿಯಲ್ಲಿ ಡಿಕೆಡಿ, ಕಾಮಿಡಿ ಕಿಲಾಡಿಗಳು ಮಹಾಸಂಚಿಕೆ