Select Your Language

Notifications

webdunia
webdunia
webdunia
webdunia

ಈ ವಿಷಯದಲ್ಲಿ ನಟ ಪ್ರಭಾಸ್ ರನ್ನೇ ಹಿಂಬಾಲಿಸಿದ ಅವರ ಅಭಿಮಾನಿಗಳು

ಈ ವಿಷಯದಲ್ಲಿ ನಟ ಪ್ರಭಾಸ್ ರನ್ನೇ ಹಿಂಬಾಲಿಸಿದ ಅವರ ಅಭಿಮಾನಿಗಳು
ಹೈದರಾಬಾದ್ , ಭಾನುವಾರ, 1 ನವೆಂಬರ್ 2020 (11:17 IST)
ಹೈದರಾಬಾದ್ : ನಟ ಪ್ರಭಾಸ್ ಅವರು ತೆಲುಗು ಚಿತ್ರರಂಗದ ಖ್ಯಾತ ನಟರಲ್ಲಿ ಒಬ್ಬರು. ಇವರು ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ. ಇವರು ನಟನೆಯ ಮೂಲಕ ಪ್ರಸಿದ್ದವಾಗಿದ್ದು ಮಾತ್ರವಲ್ಲ ತಮ್ಮ ಉತ್ತಮ ಕೆಲಸಗಳ ಮೂಲಕವೂ ಖ್ಯಾತಿ ಗಳಿಸಿದ್ದಾರೆ.

ಗ್ರೀನ್ ಇಂಡಿಯಾ ಚಾಲೆಂಜ್ ನ ಅಂಗವಾಗಿ ಸಿನಿಮಾ ತಾರೆಯರು ಒಂದು- ಎರಡು ಗಿಡಗಳನ್ನು ನೆಟ್ಟರೆ. ನಟ ಪ್ರಭಾಸ್ ಅವರು ಮಾತ್ರ ಏಕಕಾಲದಲ್ಲಿ ಕಾಡನ್ನೇ ಬೆಳೆಸಿದ್ದಾರೆ. ಅಲ್ಲದೇ ಅವರ ಅಭಿಮಾನಿಗಳು ಅವರನ್ನೇ ಹಿಂಬಾಲಿಸಿದ್ದು, ಗ್ರೀನ್ ಇಂಡಿಯಾ ಚಾಲೆಂಜ್ ನ ಅಂಗವಾಗಿ ಸಾವಿರಾರು ಗಿಡಗಳನ್ನು ನೆಡುವುದರ ಮೂಲಕ ತಾವು ಅಭಿಮಾನಿಗಳು ಎಂಬುದನ್ನು ಸಾಬೀತುಪಡಿಸಿದ್ದಾರೆ.

ಹೌದು. ಪ್ರಭಾಸ್ ಕನ್ನಡದ ಅಭಿಮಾನಿಗಳು ಗ್ರೀನ್ ಇಂಡಿಯಾ ಚಾಲೆಂಜ್ ನ ಅಂಗವಾಗಿ ಮಿನಿ ಫಾರೆಸ್ಟ್ ನ್ನು ರಚಿಸಲು ಆಸ್ಪತ್ರೆಯೊಂದಿಗೆ ಕೈಜೋಡಿಸಿದ್ದಾರೆ. ಮತ್ತು ಈ ಫಾರೆಸ್ಟ್ ನ್ನು ಪ್ರಭಾಸ್ ಮತ್ತು ಕೃಷಣರಾಜರಿಗೆ ಸಮರ್ಪಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಪ್ರಭಾಸ್ ಅಭಿಮಾನಿಗಳ ಈ ಮಹಾನ್ ಕಾರ್ಯವನ್ನು ಫೋಟೊ ಸಹಿತವಾಗಿ ಸಂಸದ ಸಂತೋಷ್ ಕುಮಾರ್ ಟ್ವೀಟರ್ ನಲ್ಲಿ ಹಂಚಿಕೊಂಡು ಅಭಿನಂದನೆ ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಜನೀಕಾಂತ್ ರಾಜಕೀಯ ಪ್ರವೇಶದ ಬಗ್ಗೆ ಬಿಜೆಪಿ ನಾಯಕಿ ಖುಷ್ಬೂ ಹೇಳಿದ್ದೇನು ಗೊತ್ತಾ?