Webdunia - Bharat's app for daily news and videos

Install App

ರೇಣುಕಾಸ್ವಾಮಿಯಿಂದ ನನಗೂ ಅಶ್ಲೀಲ ಸಂದೇಶ ಬಂದಿದೆ: ನಟಿ ಚಿತ್ರಾಲ್ ರಂಗಸ್ವಾಮಿ ಆರೋಪ

Sampriya
ಸೋಮವಾರ, 24 ಜೂನ್ 2024 (14:02 IST)
Photo Courtesy X
ಬೆಂಗಳೂರು: ದರ್ಶನ್ ಗ್ಯಾಂಗ್‌ನಿಂದ ಹತ್ಯೆಗೀಡಾದ ಚಿತ್ರಾದುರ್ಗಾದ ರೇಣುಕಸ್ವಾಮಿ ನನಗೂ ಕೂಡ ಫೇಕ್ ಅಕೌಂಟ್‌ನಿಂದ ಅಶ್ಲೀಲ ಸಂದೇಶ ಕಳುಹಿಸಿರುವುದಾಗಿ ಕಿರುತೆರೆ ನಟಿ ಚಿತ್ರಾಲ್ ರಂಗಸ್ವಾಮಿ ಹೇಳಿಕೊಂಡಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿ ಸ್ಟೋರಿ ಹಂಚಿಕೊಂಡಿರುವ ಅವರು ರೇಣುಕಸ್ವಾಮಿ ಕೃತ್ಯಗಳ ಬಗ್ಗೆ ವಿವರ ಕೊಟ್ಟಿದ್ದಾರೆ. ನಾನು ಯಾರ ಪರವಾಗಿಯೋ, ವಿರುದ್ಧವಾಗಿಯೋ ಮಾತನಾಡಲು ಬಂದಿಲ್ಲ, ರೇಣುಕಾಸ್ವಾಮಿ ಕುಟುಂಬಕ್ಕೆ ದೇವರು ಶಕ್ತಿ ಕೊಡಲಿ ಎಂದಿರುವ ಅವರು, ಈ ಅಕೌಂಟ್‌ ಬಗ್ಗೆ ಸುದ್ದಿಗಳಲ್ಲಿ ನೋಡಿದಾಗ ನನಗೂ ಈ ರೀತಿ ಮೆಸೇಜ್ ಬಂದಿರುವುದು ನೆನಪಿಗೆ ಬಂತು ಎಂದು ಹೇಳಿದ್ದಾರೆ.

ಮಾಧ್ಯಮದಲ್ಲಿ ಆ ಹೆಸರನ್ನು ನೋಡಿದಾಗ ನನಗೆ ಭಯವಾಯಿತು, ನನ್ನ ಬ್ಲಾಕ್‌ ಲಿಸ್ಟ್ ಪರಿಶೀಲಿಸಿದಾಗ ಅದೇ ಅಕೌಂಟ್‌ನಿಂದ ಕೆಟ್ಟ ಮೆಸೇಜ್ ಬಂದಿದೆ. ನನಗೆ ನಗ್ನ ಚಿತ್ರಗಳನ್ನು ಕಳಿಸಿದರೆ ಬ್ಲಾಕ್ ಮಾಡುತ್ತೇನೆ ಎಂದರು.

ಗೌತಮ್ ಕೆಎಸ್‌ 1990 ಎನ್ನುವ ಹೆಸರಿನಲ್ಲಿ ರೇಣುಕಾಸ್ವಾಮಿ ಅವರದ್ದು ಒಂದು ಫೇಕ್ ಅಕೌಂಟ್ ಇತ್ತು ಎಂದು ನಾನು ಒಂದು ನ್ಯೂಸ್‌ನಲ್ಲಿ ನೋಡ್ದೆ. ಈ ಅಕೌಂಟ್ ಇಂದ ಅದೇ ರೀತಿಯ ಕೆಟ್ಟ ಮೆಸೇಜ್‌ಗಳನ್ನು ಇನ್ನು ಸಾಕಷ್ಟು ಜನರಿಗೆ ಕಳುಹಿಸಿದ್ದರಂತೆ. ನನಗೆ ಅಚ್ಚರಿ ಆಯಿತು. ನಾನು ಅದರ ಸ್ಕ್ರೀನ್‌ ಶಾಟ್ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡರೆ ತಪ್ಪಾಗುತ್ತದೆ. ಹಾಗಾಗಿ ಹಾಕಲಿಲ್ಲ ಎಂದರು.



ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಟೈಗರ್‌ ಶ್ರಾಫ್‌ ಹತ್ಯೆಗೆ ಸುಫಾರಿ ಕೊಡಲಾಗಿದೆ ಎಂದು ಪೊಲೀಸರಿಗೆ ಕರೆ ಮಾಡಿದ್ದ ವ್ಯಕ್ತಿ ಅಂದರ್‌

Darshan Thoogudeepa: ಪವಿತ್ರಾ ಗೌಡಗೂ ದರ್ಶನ್ ಗೂ ಮದುವೆಯಾಗಿದ್ಯಾ, ಏನು ಸಂಬಂಧ ಎಂದು ಪ್ರಶ್ನಿಸಿದ ಜಡ್ಜ್

Vaishnavi Gowda: ರಿಯಲ್ ಲೈಫ್ ಗೆಳೆಯನ ಜೊತೆಗೂ ಪಕ್ಕಾ ಸೀತೆಯಂತೇ ಇರ್ತಾರೆ ವೈಷ್ಣವಿ ಗೌಡ

Darshan Thoogudeepa: ನಟ ದರ್ಶನ್ ಗೆ ಶುರುವಾಯ್ತು ಗಡ ಗಡ: ಸುಪ್ರೀಂಕೋರ್ಟ್ ನಲ್ಲಿ ಇಂದು ಭವಿಷ್ಯ

Prithwi Bhat marriage: ಸರಿಗಮಪ ಸಿಂಗರ್ ಪೃಥ್ವಿ ಭಟ್ ಮದುವೆ ವಿವಾದ: ಮನೆ ಬಿಟ್ಟು ಹೋಗಿದ್ದಕ್ಕೆ ಕಾರಣ ಹೇಳಿದ ಗಾಯಕಿ

ಮುಂದಿನ ಸುದ್ದಿ