Select Your Language

Notifications

webdunia
webdunia
webdunia
webdunia

ಆತನ ಕಷ್ಟನ ನೋಡಿ ಸಂಭ್ರಮಿಸುವ ವ್ಯಕ್ತಿ ನಾನಲ್ಲ: ದರ್ಶನ್ ಕುರಿತು ಸುದೀಪ್ ಮಾತು

Sudeep Darshan

Sampriya

ಬೆಂಗಳೂರು , ಭಾನುವಾರ, 15 ಸೆಪ್ಟಂಬರ್ 2024 (16:09 IST)
Photo Courtesy X
ಬೆಂಗಳೂರು: ನನ್ನ ಸ್ನೇಹಿತ ತೊಂದರೆಯಲ್ಲಿದ್ದಾಗ ಅದನ್ನು ನೋಡಿ ಖುಷಿ ಪಡುವ ವ್ಯಕ್ತಿ ನಾನಲ್ಲ ಎಂದು ಕಿಚ್ಚ ಸುದೀಪ್ ಹೇಳುವ ಮೂಲಕ ದರ್ಶನ್ ಮೇಲಿನ ಸ್ನೇಹನ ಬಗ್ಗೆ ಪರೋಕ್ಷವಾಗಿ ಮಾತನಾಡಿದ್ದಾರೆ.

ಈಚೆಗೆ ಖಾಸಗಿ ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ ಸುದೀಪ್ ಅವರು ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ದರ್ಶನ್ ಬಗ್ಗೆ ಮಾತನಾಡಿದ್ದಾರೆ.

ನಮ್ಮಿಬ್ಬರ ಜಗಳ, ಸ್ಪರ್ಧೆ ವೈಯಕ್ತಿಕ. ಆ ವ್ಯಕ್ತಿಗೆ ತೊಂದರೆ ಆಗ್ತಾ ಇದೆ ಅಂದಾಗ ಅದನ್ನು ನೋಡಿ ಖುಷಿ ಪಡುವ ವ್ಯಕ್ತಿ ನಾನಲ್ಲ. ಯಾಕೆ ಹೀಗಾಯಿತು ಅನ್ನುವ ನೋವು ಅಂತಾ ಆಯಿತು. ಕೆಲವು ವ್ಯಕ್ತಿಗಳು ಮಾತನಾಡದಿದ್ರು ಪರವಾಗಿಲ್ಲ, ಆದರೆ ಕಣ್ಮುಂದೆ ಚೆನ್ನಾಗಿ ಓಡಾಡುತ್ತಿದ್ದರೆ ಸಾಕು ಎನಿಸುತ್ತದೆ ಎಂದು ಹೇಳುವ ಮೂಲಕ ದರ್ಶನ್ ಅವರ ಜೈಲು ಸೇರಿರುವ ಬಗ್ಗೆ ಪರೋಕ್ಷವಾಗಿ ನೋವು ತೋಡಿಕೊಂಡರು.

ಸುದೀಪ್ ಅವರು ಸ್ನೇಹದ ಬಗ್ಗೆ ಹೇಳಿರುವ ಈ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದರ್ಶನ್ ಹಾಗೂ ಸುದೀಪ್ ಅವರು ಮಾತು ಬಿಟ್ಟು ದಶಕಗಳ ಕಳೆದಿವೆ. ಆದರೆ ಇವರ ಅಭಿಮಾನಿಗಳು ಮಾತ್ರ ಈ ಸ್ನೇಹಿತರ ಆದಷ್ಟು ಬೇಗ ಒಂದೇ ಫ್ರೇಮ್‌ನಲ್ಲಿ ಕಾಣಿಸಿಕೊಳ್ಳಲಿ ಎಂದು ಹಾರೈಸುತ್ತಿರುತ್ತಾರೆ.

ಇದೀಗ ದರ್ಶನ್ ಸ್ನೇಹದ ಬಗ್ಗೆ ಸುದೀಪ್ ಹೇಳಿರುವ ಮಾತುಗಳು ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ದರ್ಶನ್ ಹೊಸ ಬೇಡಿಕೆಯನ್ನು ನಯವಾಗಿ ತಿರಸ್ಕರಿಸಿದ ಜೈಲಾಧಿಕಾರಿಗಳು