Select Your Language

Notifications

webdunia
webdunia
webdunia
webdunia

ಮಕ್ಕಳಾಗಿಲ್ಲ! ಸಲಹೆ ಕೊಡಿ ಎಂದ ಅಭಿಮಾನಿಗೆ ನವರಸನಾಯಕ ಜಗ್ಗೇಶ್ ಕೊಟ್ಟ ಸಲಹೆಯೇನು ಗೊತ್ತಾ?!

ಮಕ್ಕಳಾಗಿಲ್ಲ! ಸಲಹೆ ಕೊಡಿ ಎಂದ ಅಭಿಮಾನಿಗೆ ನವರಸನಾಯಕ ಜಗ್ಗೇಶ್ ಕೊಟ್ಟ ಸಲಹೆಯೇನು ಗೊತ್ತಾ?!
ಬೆಂಗಳೂರು , ಸೋಮವಾರ, 22 ಜೂನ್ 2020 (09:17 IST)
ಬೆಂಗಳೂರು: ನವರಸನಾಯಕ ಜಗ್ಗೇಶ್ ತಮ್ಮ ಟ್ವಿಟರ್ ಪೇಜ್ ನಲ್ಲಿ ಅಭಿಮಾನಿಗಳ ಸಮಸ್ಯೆಗೆ ಸ್ಪಂದಿಸುತ್ತಿರುತ್ತಾರೆ. ಆದರೆ ಅಭಿಮಾನಿಯೊಬ್ಬ ಅವರ ಬಳಿಕ ನಮಗೆ ಮಕ್ಕಳಾಗಿಲ್ಲ, ಹಾಸ್ಪಿಟಲ್, ದೇವರ ಗುಡಿ ಸುತ್ತಿದರೂ ಪ್ರಯೋಜನವಾಗಿಲ್ಲ. ಏನಾದರೂ ಸಲಹೆ ಕೊಡಿ ಎಂದು ಕೇಳಿದ್ದಾನೆ.

 

ಅಭಿಮಾನಿಗಳ ಯಾವ ಮನವಿಯನ್ನೂ ಜಗ್ಗೇಶ್ ಹಗುರವಾಗಿ ಕಾಣುವವರಲ್ಲ. ಹೀಗಾಗಿ ಈ ಅಭಿಮಾನಿಗೂ ಅತ್ಯುತ್ತಮ ಸಲಹೆಯನ್ನೇ ಕೊಟ್ಟಿದ್ದಾರೆ. ಹೋಮಿಯೋಪತಿ ವೈದ್ಯ ಡಾ. ರುದ್ರೇಶ್ ಭೇಟಿ ಮಾಡಿ ಎಂದು ಫೋನ್ ನಂಬರ್ ಕೊಟ್ಟಿದ್ದಲ್ಲದೆ, ಗೋಪಾಲಕೃಷ್ಣ ಆಲಯದಲ್ಲಿ ಪೂಜೆ ಮಾಡಿ ಮತ್ತು ರಾಯರಲ್ಲಿ ಪ್ರಾರ್ಥನೆ ಮಾಡಿ ಎಂದಿದ್ದಾರೆ. ಅಲ್ಲದೆ, ಸಾಧ್ಯವಾದರೆ ಸರ್ಪ ಸಂಸ್ಕಾರ ಮಾಡಿಸಿ ಎಂದೂ ಸಲಹೆ ಕೊಟ್ಟಿದ್ದಾರೆ! ಜಗ್ಗೇಶ್ ಸಲಹೆಯಿಂದ ಖುಷಿಯಾದ ಅಭಿಮಾನಿ ಸಿಹಿ ಸುದ್ದಿ ಬಂದ ತಕ್ಷಣ ನಿಮಗೆ ತಿಳಿಸುವೆ ಎಂದು ಪ್ರಾಮಿಸ್ ಮಾಡಿದ್ದಾರೆ!

Share this Story:

Follow Webdunia kannada

ಮುಂದಿನ ಸುದ್ದಿ

ಚಿರಂಜೀವಿ ಸರ್ಜಾ, ಸುಶಾಂತ್ ಸ್ಮರಣೆಗಾಗಿ ನಟಿ ಪ್ರಣೀತಾ ಸುಭಾಷ್ ಮಾಡಿದ್ದೇನು ಗೊತ್ತಾ?!