Select Your Language

Notifications

webdunia
webdunia
webdunia
webdunia

ತಲ್ವಾರ್ ಪ್ರಕರಣ: ಪೊಲೀಸರ ಎದುರು ಹಾಜರಾದ ನಟ ದುನಿಯಾ ವಿಜಯ್

ತಲ್ವಾರ್ ಪ್ರಕರಣ: ಪೊಲೀಸರ ಎದುರು ಹಾಜರಾದ ನಟ ದುನಿಯಾ ವಿಜಯ್
ಬೆಂಗಳೂರು , ಮಂಗಳವಾರ, 21 ಜನವರಿ 2020 (16:10 IST)
ಬೆಂಗಳೂರು: ಬರ್ತ್ ಡೇ ಕೇಕ್ ಕಟ್ ಮಾಡುವಾಗ ತಲ್ವಾರ್ ಬಳಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದುನಿಯಾ ವಿಜಯ್ ಗಿರಿನಗರ ಪೊಲೀಸರ ಮುಂದೆ ಹಾಜರಾಗಿ ಸ್ಪಷ್ಟನೆ ನೀಡಿದ್ದಾರೆ.


ನಿನ್ನೆ ಬರ್ತ್ ಡೇ ಆಚರಿಸಿಕೊಂಡಿದ್ದ ದುನಿಯಾ ವಿಜಯ್ ತಲ್ವಾರ್ ಬಳಸಿ ಕೇಕ್ ಕಟ್ ಮಾಡಿದ ವಿಡಿಯೋ ವೈರಲ್ ಆಗಿತ್ತು. ಈ ಬಗ್ಗೆ ಗಿರಿನಗರ ಪೊಲೀಸರು ವಿಜಯ್ ಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದರು.

ಅದರಂತೆ ಇಂದು ವಿಚಾರಣೆಗೆ ಹಾಜರಾದ ವಿಜಿ ಸ್ಪಷ್ಟನೆ ನೀಡಿದ್ದಾರೆ. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಗೊತ್ತಾಗದೇ ತಪ್ಪು ಮಾಡಿದೆ. ಇದು ಕಾನೂನು ವಿರುದ್ಧ ಹೀಗೆ ಮಾಡಬಾರದು ಎಂದು ಪೊಲೀಸರು ಹೇಳಿದರು. ಇನ್ನು ಮುಂದೆ ಹೀಗಾಗದಂತೆ ನೋಡಿಕೊಳ್ಳುತ್ತೇನೆ ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ಕೊನೇ ದಿನದ ಶೂಟಿಂಗ್ ಮುಗಿಸಿದ ಲಕ್ಷ್ಮೀ ಬಾರಮ್ಮ