Select Your Language

Notifications

webdunia
webdunia
webdunia
webdunia

ರಾಕಿ ಬಾಯ್ ಯಶ್ ಭೇಟಿ ಮಾಡಿದ ಹಿನ್ನಲೆ ವಿವರಿಸಿದ ಮಲಯಾಳಂ ಸ್ಟಾರ್ ದುಲ್ಕರ್ ಸಲ್ಮಾನ್

ರಾಕಿ ಬಾಯ್ ಯಶ್ ಭೇಟಿ ಮಾಡಿದ ಹಿನ್ನಲೆ ವಿವರಿಸಿದ ಮಲಯಾಳಂ ಸ್ಟಾರ್ ದುಲ್ಕರ್ ಸಲ್ಮಾನ್
ಬೆಂಗಳೂರು , ಗುರುವಾರ, 6 ಫೆಬ್ರವರಿ 2020 (09:11 IST)
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಮತ್ತು ಮಲಯಾಳಂ ಸ್ಟಾರ್ ನಟ ದುಲ್ಕರ್ ಸಲ್ಮಾನ್ ಪರಸ್ಪರ ಭೇಟಿಯಾಗಿದ್ದ ಫೋಟೋಗಳು ನಿನ್ನೆಯಿಡೀ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿತ್ತು. ಇಬ್ಬರೂ ಸ್ಟಾರ್ ನಟರೂ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗ ಬರೆದುಕೊಂಡು ಅಭಿಮಾನಿಗಳ ಕುತೂಹಲಕ್ಕೆ ಉತ್ತರ ನೀಡಿದ್ದಾರೆ.


ರಾಕಿ ಬಾಯ್ ಮತ್ತು ದುಲ್ಕರ್ ಭೇಟಿಯಾಗಿದ್ದೇಕೆ? ಇಬ್ಬರೂ ಸಿನಿಮಾ ಮಾಡ್ತಾರಾ ಎಂಬಿತ್ಯಾದಿ ಪ್ರಶ್ನೆಗಳು ಹುಟ್ಟಿಕೊಂಡಿದ್ದು ನಿಜ. ಆದರೆ ಇದೊಂದು ಸೌಹಾರ್ದಯುತ ಭೇಟಿಯಾಗಿತ್ತು. ದುಲ್ಕರ್ ಮೈಸೂರಿಗೆ ಬಂದಿದ್ದಾಗ ತಾವೇ ಬಂದು ನನ್ನನ್ನು ಭೇಟಿ ಮಾಡಿದರು ಎಂದು ಇನ್ ಸ್ಟಾಗ್ರಾಂನಲ್ಲಿ ಬರೆದುಕೊಂಡ ಯಶ್ ಮತ್ತೆ ನಮ್ಮ ಮೈಸೂರಿಗೆ ಬಂದರೆ ಇಲ್ಲಿನ ಸ್ವಾದಿಷ್ಠ ಖಾದ್ಯಗಳನ್ನು ತಿನಿಸುವುದಾಗಿ ಬರೆದುಕೊಂಡಿದ್ದಾರೆ.

ಅತ್ತ ದು‍ಲ್ಕರ್ ಕೂಡಾ ಯಶ್ ಭೇಟಿಯಾಗಿದ್ದರ ಬಗ್ಗೆ ಖುಷಿಯಿಂದಲೇ ಟ್ವೀಟ್ ಮಾಡಿದ್ದು, ಮತ್ತೊಮ್ಮೆ ರಾಕಿ ಬಾಯ್ ಭೇಟಿಯಾಗಲು ಬಯಸುವೆ ಎಂದಿದ್ದಾರೆ. ಅಷ್ಟೇ ಅಲ್ಲದೆ, ಕೆಜಿಎಫ್ 2 ಗೆ ಆಲ್ ದಿ ಬೆಸ್ಟ್ ಕೂಡಾ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಕಿಂಗ್ ಸ್ಟಾರ್ ಯಶ್ ಭೇಟಿಯಾದ ಮಲಯಾಳಂ ಸ್ಟಾರ್ ದುಲ್ಕರ್ ಸಲ್ಮಾನ್