Select Your Language

Notifications

webdunia
webdunia
webdunia
webdunia

ಪವನ್ ಕಲ್ಯಾಣ್ ಕಟೌಟ್ ಹಾಕಲು ಹೋದ ಅಭಿಮಾನಿಗಳಿಗೆ ಆಗಿದ್ದೇನು ಗೊತ್ತಾ?

ಪವನ್ ಕಲ್ಯಾಣ್ ಕಟೌಟ್ ಹಾಕಲು ಹೋದ ಅಭಿಮಾನಿಗಳಿಗೆ ಆಗಿದ್ದೇನು ಗೊತ್ತಾ?
ಹೈದರಾಬಾದ್ , ಬುಧವಾರ, 2 ಸೆಪ್ಟಂಬರ್ 2020 (12:11 IST)
ಹೈದರಾಬಾದ್ : ಟಾಲಿವುಡ್ ನ ಖ್ಯಾತ ನಟ ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರ  ಕಟೌಟ್ ಹಾಕಲು ಹೋಗಿ ಮೂವರು ಅಭಿಮಾನಿಗಳು ವಿದ್ಯುತ್ ಶಾಕ್ ಹೊಡೆದು ಸಾನಪ್ಪಿದ ಘಟನೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಕಡಪ್ಪ ಹಳ್ಳಿ ಬಳಿ ನಡೆದಿದೆ.

ಸೋಮಶೇಖರ್(30), ರಾಜಶೇಖರ್(32), ಅರುಣಾಚಲಂ(28) ಮೃತಪಟ್ಟ  ಅಭಿಮಾನಿಗಳು. ಈ ಮೂವರು ಸೇರಿದಂತೆ 5 ಮಂದಿ ನಟ ಪವನ್ ಕಲ್ಯಾಣ್ ಹುಟ್ಟುಹಬ್ಬದ ಹಿನ್ನಲೆಯಲ್ಲಿ ಸುಮಾರು 25 ಅಡಿ ಎತ್ತರದ ಕಟೌಟ್ ಕಟ್ಟಲು ಹೋಗಿದ್ದಾರೆ. ಆ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿ ಮೂವರು ಸ್ಥಳದಲ್ಲೇ ಸಾವನಪ್ಪಿದ್ದು, ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ಈ ಘಟನೆ ಬಗ್ಗೆ ನಟ ಪವನ್ ಕಲ್ಯಾಣ್ ಸಂತಾಪ ವ್ಯಕ್ತಪಡಿಸಿದ್ದು, ಮೃತರ ಕುಟುಂಬಕ್ಕೆ ಸಾಂತ್ವಾನ ಹೇಳಿ ಜನಸೇನಾ ಪಕ್ಷದ ಪರವಾಗಿ ತಲಾ 2 ಲಕ್ಷ ರೂ. ನೀಡುವುದಾಗಿ ಘೋಷಿಸಿದ್ದಾರೆ ಎನ್ನಲಾಗಿದೆ.

 

 

 

Share this Story:

Follow Webdunia kannada

ಮುಂದಿನ ಸುದ್ದಿ

ಈ ವಿಚಾರದಲ್ಲಿ ಮಹೇಶ್ ಬಾಬು ಅಭಿಮಾನಿಗಳ ಜೊತೆ ಪೈಪೋಟಿಗಿಳಿದ ಪವನ್ ಕಲ್ಯಾಣ್ ಅಭಿಮಾನಿಗಳು