Publish Date: Tue, 01 Dec 2020 (09:16 IST)
Updated Date: Tue, 01 Dec 2020 (09:18 IST)
ಬೆಂಗಳೂರು: ಪೈಲ್ವಾನ್ ನಿರ್ದೇಶಕ ಕೃಷ್ಣ ಪಿತೃವಿಯೋಗದ ದುಃಖದಲ್ಲಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ತಮ್ಮ ಪ್ರೀತಿಯ ತಂದೆ ನಿಧನರಾದ ಸಂಗತಿಯನ್ನು ಕೃಷ್ಣ ಹಂಚಿಕೊಂಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಕಿಚ್ಚ ಸುದೀಪ್ ಸಾಂತ್ವನಿಸಿದ್ದಾರೆ. ನನ್ನ ತಂದೆ ಡಾ. ಸುಬ್ಬಣ್ಣ 29 ನೇ ತಾರೀಖಿನಂದು ಇನ್ನಿಲ್ಲವಾದರು. ಇದು ನನಗೆ ಅತ್ಯಂತ ದುಃಖದ ವಿಚಾರ. ನಮ್ಮ ಕಷ್ಟದ ಸಮಯದಲ್ಲಿ ನಮ್ಮ ಜತೆಗೆ ನಿಂತು ಪ್ರಾರ್ಥಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ಕೃಷ್ಣ ಬರೆದುಕೊಂಡಿದ್ದಾರೆ. ಇದಕ್ಕೆ ಕಿಚ್ಚ ಸುದೀಪ್ ಸಂತಾಪ ವ್ಯಕ್ತಪಡಿಸಿದ್ದಾರೆ.