Select Your Language

Notifications

webdunia
webdunia
webdunia
webdunia

ಶೃತಿ ಹರಿಹರನ್ ಬೆಂಬಲಿಸಿದ ನಟ ಚೇತನ್ ಗೆ ದೂರವಾಣಿಯಲ್ಲೇ ಬೆವರಿಳಿಸಿದ ಧ್ರುವ ಸರ್ಜಾರಿಂದ ಈಗ ಮತ್ತೊಂದು ನಿರ್ಧಾರ!

ಶೃತಿ ಹರಿಹರನ್ ಬೆಂಬಲಿಸಿದ ನಟ ಚೇತನ್ ಗೆ ದೂರವಾಣಿಯಲ್ಲೇ ಬೆವರಿಳಿಸಿದ ಧ್ರುವ ಸರ್ಜಾರಿಂದ ಈಗ ಮತ್ತೊಂದು ನಿರ್ಧಾರ!
ಬೆಂಗಳೂರು , ಬುಧವಾರ, 24 ಅಕ್ಟೋಬರ್ 2018 (09:22 IST)
ಬೆಂಗಳೂರು: ಅರ್ಜುನ್ ಸರ್ಜಾ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ನಟಿ ಶೃತಿ ಹರಿಹರನ್ ಗೆ ಖಾಸಗಿ ವಾಹಿನಿಯ ಕಾರ್ಯಕ್ರಮವೊಂದರಲ್ಲಿ ದೂರವಾಣಿಯಲ್ಲೇ ಧಮ್ಕಿ ಹಾಕಿದ ನಟ ಧ್ರುವ ಸರ್ಜಾ ಇದೀಗ ಪತ್ರಿಕಾಗೋಷ್ಠಿ ನಡೆಸಲಿದ್ದಾರಂತೆ.

ಮಾವ ಅರ್ಜುನ್ ಸರ್ಜಾ ಪರ ನಿಂತಿರುವ ಧ್ರುವ ಸರ್ಜಾ ಶೃತಿ ಹರಿಹರನ್ ವಿರುದ್ಧ ಕಿಡಿ ಕಾರಿದ್ದಲ್ಲದೆ, ಅವರನ್ನು ಬೆಂಬಲಿಸುತ್ತಿರುವ ಚೇತನ್ ವಿರುದ್ಧವೂ ಗುಡುಗಿದ್ದಾರೆ. ಸತ್ಯ ತಿಳಿದುಕೊಳ್ಳದೇ ನಿನ್ನ ಲಾಭಕ್ಕೆ ಏನೇನೋ ಹೇಳಬೇಡ ಎಂದು ಚೇತನ್ ವಿರುದ್ಧ ಕಿಡಿ ಕಾರಿದ್ದಾರೆ.

ಅಷ್ಟೇ ಅಲ್ಲದೆ, ಈ ವಿಚಾರವಾಗಿ ಸದ್ಯದಲ್ಲೇ ಪತ್ರಿಕಾಗೋಷ್ಠಿ ಕರೆದು ನಾವು ಮನೆಯವರೆಲ್ಲಾ ಕೂತು ಇದರ ಬಗ್ಗೆ ವಿವರ ನೀಡುತ್ತೇವೆ ಎಂದು ಧ್ರುವ ಸರ್ಜಾ ಹೇಳಿಕೊಂಡಿದ್ದಾರೆ.

ಇನ್ನೊಂದೆಡೆ ಗಂಡ ಹೆಂಡತಿ ಖ್ಯಾತಿಯ ನಟಿ ಸಂಜನಾ ಆ ಚಿತ್ರದ ನಿರ್ದೇಶಕ ರವಿ ಶ್ರೀವತ್ಸ ವಿರುದ್ಧ ಮೀ ಟೂ ಅಭಿಯಾನದಲ್ಲಿ ಹೊರಿಸಿದ್ದ ಲೈಂಗಿಕ ಕಿರುಕುಳ ಆರೋಪಕ್ಕೆ ಇಂದು ರವಿ ಶ್ರೀವತ್ಸ ಉತ್ತರಿಸುವ ನಿರೀಕ್ಷೆಯಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

'ಶಬರಿಮಲೆ ವಿಚಾರದ ಬದಲು ಕಾವೇರಿ ನದಿ ನೀರಿನ ವಿಚಾರ ಮಾತನಾಡಿ' ಕನ್ನಡಿಗರನ್ನು ಕೆರಳಿಸಿದ್ರಾ ಕಮಲ್ ಹಾಸನ್