Publish Date: Sun, 21 Oct 2018 (17:32 IST)
Updated Date: Sun, 21 Oct 2018 (17:33 IST)
ಬೆಂಗಳೂರು: ನಟ ಅರ್ಜುನ್ ಸರ್ಜಾ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ನಟಿ ಶೃತಿ ಹರಿಹರನ್ ಅದರ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿ ಆರೋಪಗಳ ಸುರಿಮಳೆ ಸುರಿಸಿದ್ದಾರೆ.
ಘಟನೆ ನಡೆದಾಗ ನನಗೆ ಹೇಳಿಕೊಳ್ಳುವ ಧೈರ್ಯವಿರಲಿಲ್ಲ. ಈಗ ಧೈರ್ಯ ಬಂದಿದೆ. ಅದಕ್ಕೇ ಹೇಳುತ್ತಿದ್ದೇನೆ. ನಾನು ಈ ಘಟನೆಯಿಂದ ಸಾಕಷ್ಟು ನೊಂದಿದ್ದೇನೆ ಎಂದು ಶೃತಿ ಹೇಳಿಕೊಂಡಿದ್ದಾರೆ.
ಅಷ್ಟೇ ಅಲ್ಲ, ಅರ್ಜುನ್ ಸರ್ಜಾ ಎಂಬ ಹೆಸರು ನೋಡಿ ತೀರ್ಮಾನಕ್ಕೆ ಬರಬೇಡಿ, ಅವರ ತಪ್ಪು ಏನು ಎಂಬುದನ್ನು ನೋಡಿ. ನಾನು ಅವರ ಮೇಲೆ ಆರೋಪ ಮಾಡಿದ ಮೇಲೆ ಹಲವು ಬೆದರಿಕೆ ಕರೆಗಳು ನನಗೆ ಬರುತ್ತಿವೆ. ಎಲ್ಲದರ ವಿರುದ್ಧವೂ ಕಾನೂನು ಹೋರಾಟ ಮಾಡುತ್ತೇನೆ ಎಂದು ಶೃತಿ ಖಚಿತಪಡಿಸಿದ್ದಾರೆ.
ಅಷ್ಟೇ ಅಲ್ಲದೆ, ಶೂಟಿಂಗ್ ಮುಗಿದ ಮೇಲೆ ಡಿನ್ನರ್ ಗೆ ಬರುವಂತೆ ಹಲವು ಬಾರಿ ಕರೆದಿದ್ದರು. ಆದರೆ ಪ್ರತೀ ಬಾರಿಯೂ ನಾನು ನಿರಾಕರಿಸಿದ್ದೆ ಎಂದು ಶೃತಿ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದಾರೆ. ಇದೀಗ ಶೃತಿ ಹರಿಹರನ್ ಗೆ ಇನ್ನೊಬ್ಬ ನಟಿ ನೀತೂ ಬೆಂಬಲ ಸೂಚಿಸಿದ್ದಾರೆ. ತಮಗೂ ಇಂತಹ ಹಲವು ಅನುಭವಗಳಾಗಿವೆ. ಒಂದೆರಡು ಕಹಿ ಅನುಭವವಾಗಿದೆ. ಆದರೆ ಹೆಸರು ಬಹಿರಂಗಪಡಿಸಿದರೆ ನೀವು ನಂಬಲ್ಲ ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.