Select Your Language

Notifications

webdunia
webdunia
webdunia
webdunia

ಜೈಲು ಸೇರಿದ ದರ್ಶನ್‌ ಬಗ್ಗೆ ಮೊದಲ ಬಾರಿ ಮೌನ ಮುರಿದ ಧ್ರುವ ಸರ್ಜಾ

ಜೈಲು ಸೇರಿದ ದರ್ಶನ್‌ ಬಗ್ಗೆ ಮೊದಲ ಬಾರಿ ಮೌನ ಮುರಿದ ಧ್ರುವ ಸರ್ಜಾ

Sampriya

ಬೆಂಗಳೂರು , ಸೋಮವಾರ, 22 ಜುಲೈ 2024 (15:19 IST)
Photo Courtesy X
ಬೆಂಗಳೂರು: ಚಿತ್ರದುರ್ಗಾದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ಘಟನೆ ನಟ ದರ್ಶನ್ ಅವರ ಬಗ್ಗೆ ನಟ ಸುದೀಪ್,  ಶಿವಣ್ಣ ಸೇರಿದಂತೆ ಕನ್ನಡ ಇಂಡಸ್ಟ್ರಿಯ ಪ್ರಮುಖರು ಪ್ರತಿಕ್ರಿಯಿಸಿದ್ದರು.

ಆದರೆ ಇದೀಗ ಮೊದಲ ಬಾರಿ ಧ್ರುವ ಸರ್ಜಾ ಅವರು ದರ್ಶನ್ ಬಗ್ಗೆ ಖಾಸಗಿ ವಾಹಿನಿಯೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ.  

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಕಾನೂನಿಗಿಂತ ಯಾರು ದೊಡ್ಡವರಲ್ಲ. ಪ್ರಕರಣ ಇನ್ನೂ ಕೋರ್ಟ್‌ನಲ್ಲಿದೆ.  ನೋಡೋಣ ಈ ಕೇಸ್ ಮುಂದೆ ಏನಾಗುತ್ತೆ ಅಂತ ಎಂದಿದ್ದಾರೆ.

ಇನ್ನೂ ಡಿ ಗ್ಯಾಂಗ್‌ನಿಂದ ಹತ್ಯೆಯಾದ ರೇಣುಕಾಸ್ವಾಮಿ ಕುಟುಂಬವನ್ನು ಧ್ರುವ ಸರ್ಜಾ ಅವರ ಅಭಿಮಾನಿಗಳು ಭೇಟಿಯಾಗಿ ಧನ ಸಹಾಯ ಮಾಡಿದ್ದರು. ಈ ವೇಳೆ ಧ್ರುವ ಅವರು ರೇಣುಕಾಸ್ವಾಮಿ ಕುಟುಂಬದವರ ಜತೆ ಫೋನ್‌ನಲ್ಲಿ ಮಾತನಾಡಿ, ಧೈರ್ಯ ತುಂಬಿದ್ದರು.

ಸದ್ಯ ಧ್ರುವ ಅವರು ಅಭಿನಯದ ಮಾರ್ಟಿನ್ ಮತ್ತು ಕೆಡಿ ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿದೆ. ಮಾರ್ಟಿನ್ ಸಿನಿಮಾ ರಿಲೀಸ್‌ಗೆ ಮುಹೂರ್ತ ಫಿಕ್ಸ್ ಆಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ತರುಣ್ ಸುಧೀರ್ ಕೈ ಹಿಡಿಯಲಿರುವ ಸೋನಲ್ ಮಾಂತೆರೊ ವಯಸ್ಸು, ಹಿನ್ನಲೆ ವಿವರ ಇಲ್ಲಿದೆ