Select Your Language

Notifications

webdunia
webdunia
webdunia
webdunia

ಡಾ.ರಾಜ್ ಜೀವ ತುಂಬಿದ ಪಾತ್ರ ಮಾಡುವ ಆಸೆ ಹೊರ ಹಾಕಿದ ದರ್ಶನ್

ಡಾ.ರಾಜ್ ಜೀವ ತುಂಬಿದ ಪಾತ್ರ ಮಾಡುವ ಆಸೆ ಹೊರ ಹಾಕಿದ ದರ್ಶನ್
ಬೆಂಗಳೂರು , ಸೋಮವಾರ, 4 ಮಾರ್ಚ್ 2019 (09:36 IST)
ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಶ್ರೀಕೃಷ್ಣದೇವರಾಯ ಪಾತ್ರ ಎಂದರೆ ತಕ್ಷಣ ನೆನಪಾಗುವುದು ಡಾ. ರಾಜ್ ಕುಮಾರ್. ಇದೀಗ ಡಾ. ರಾಜ್ ಮಾಡಿದ ಪಾತ್ರ ಮಾಡುವ ಆಸೆಯನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೊರ ಹಾಕಿದ್ದಾರೆ.


ಹಂಪಿ ಉತ್ಸವಕ್ಕೆ ಬಂದಿದ್ದ ದರ್ಶನ್ ಗೆ ಪತ್ರಕರ್ತರು ನೀವು ಶ್ರೀಕೃಷ್ಣದೇವರಾಯ ಪಾತ್ರ ಮಾಡುತ್ತೀರಾ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ದರ್ಶನ್ ನಿರ್ಮಾಪಕ ಮುನಿರತ್ನ ಅವಕಾಶ ಕೊಟ್ಟರೆ ಮಾಡುತ್ತೇನೆ ಎಂದಿದ್ದಾರೆ.

ಇದಕ್ಕೂ ಮೊದಲು ಮುನಿರತ್ನ ಕೂಡಾ ಶ್ರೀಕೃಷ್ಣದೇವರಾಯ ಕುರಿತು ಸಿನಿಮಾ ಮಾಡುವ ಇಂಗಿತ ವ್ಯಕ್ತಪಡಿಸಿದ್ದರು. ಈಗಾಗಲೇ ಸಂಗೊಳ್ಳಿ ರಾಯಣ್ಣ, ಕುರುಕ್ಷೇತ್ರ ಸಿನಿಮಾ ಮಾಡಿ ಐತಿಹಾಸಿಕ ಪಾತ್ರಗಳಿಗೆ ಸೈ ಎನಿಸಿಕೊಂಡಿರುವ ದರ್ಶನ್, ಮುನಿರತ್ನ ಮನಸ್ಸು ಮಾಡಿದರೆ ಶ್ರೀಕೃಷ್ಣದೇವರಾಯನಾಗಿಯೂ ಮಿಂಚುವುದು ಗ್ಯಾರಂಟಿ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

‘ಜೈ ಹಿಂದ್’ ಎಂದ ಪ್ರಿಯಾಂಕಾ ಚೋಪ್ರಾ ವಿರುದ್ಧ ದೂರು!