Select Your Language

Notifications

webdunia
webdunia
webdunia
webdunia

ಚಾರ್ಜ್‌ಶೀಟ್‌ನ ಕರಾಳ ಮುಖ ಹೊರಬೀಳುತ್ತಿದ್ದ ಹಾಗೇ ಪತ್ನಿ ಜತೆ ಮಾತನಾಡಿದ ದರ್ಶನ್

Darshan

Sampriya

ಬಳ್ಳಾರಿ , ಮಂಗಳವಾರ, 10 ಸೆಪ್ಟಂಬರ್ 2024 (17:56 IST)
ಬಳ್ಳಾರಿ: ಜಾರ್ಜ್‌ಶೀಟ್‌ನಲ್ಲಿರುವ ರೇಣುಕಾಸ್ವಾಮಿ ಹತ್ಯೆಯ ಭೀಕರತೆಯ ವಿಚಾರಗಳು ಹಾಗೂ ಪವಿತ್ರಾ ಗೌಡ ಜತೆಗಿನ ಲವ್ ರಿಲೇಶನ್‌ ಶಿಪ್‌ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಭಿತ್ತರವಾಗುತ್ತಿದ್ದ ಹಾಗೇ ಕೊಲೆ ಆರೋಪಿ ದರ್ಶನ್‌ ಪತ್ನಿಗೆ ದೂರವಾಣಿ ಕರೆ ಮಾಡಿ ಮಾತನಾಡಿದ್ದಾರೆ. ಪತ್ನಿ ವಿಜಯಲಕ್ಷ್ಮಿ ಜೊತೆ ಪ್ರಿಸನ್ ಕಾಲ್ ಸಿಸ್ಟಮ್ ಮೂಲಕ 5 ನಿಮಿಷಗಳ ಕಾಲ ದರ್ಶನ್ ಮಾತನಾಡಿದ್ದಾರೆ.

ಇತ್ತ ಜಾರ್ಜ್‌ಶೀಟ್‌ನಲ್ಲಿರುವ ಹತ್ಯೆಯ ಒಂದೊಂದೆ ವಿಚಾರಗಳು ಹೊರಬೀಳುತ್ತಿರುವುದನ್ನು ಟಿವಿಯಲ್ಲಿ ನೋಡಿ ಜೈಲಿನಲ್ಲಿ ದರ್ಶನ್ ಕಂಗಲಾಗಿದ್ದಾರೆ ಎಂದು ತಿಳಿದುಬಂದಿದೆ.

ಹೈಸೆಕ್ಯೂರಿಟಿ ಸೆಲ್‌ನಿಂದಲೇ ಪ್ರಿಸನ್ ಕಾಲ್ ಸಿಸ್ಟಮ್ ಮೂಲಕ ಮಾತನಾಡಿದ ದರ್ಶನ್ ಅವರು ನಾಳೆ ಜೈಲಿಗೆ ಬಂದು ಭೇಟಿಯಾಗುವಂತೆ ಕೇಳಿಕೊಂಡಿದ್ದಾರೆ. ಅದಲ್ಲದೆ ಪತ್ನಿ ಜತೆ ಮಾತನಾಡುವಾಗ ಆರೋಪಿ ದರ್ಶನ್ ಭಾವುಕರಾಗಿದ್ದಾರೆ.

ಬುಧವಾರ ಜೈಲಿಗೆ ಬರುವಂತೆ ಪತ್ನಿಗೆ ಆರೋಪಿ ತಿಳಿಸಿದ್ದಾರೆ. ಈ ಬಗ್ಗೆ ಜೈಲಾಧಿಕಾರಿಗಳಿಗೂ ದರ್ಶನ್‌ ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ. ಪತ್ನಿ ವಿಜಯಲಕ್ಷ್ಮಿ ಹಾಗೂ ದರ್ಶನ್ ತಾಯಿ ಮೀನಾ ಬುಧವಾರ ಸಂಜೆ 4 ಗಂಟೆಯ ನಂತರ ಬಳ್ಳಾರಿ ಸೆಂಟ್ರಲ್ ಜೈಲಿಗೆ ಬರಲಿದ್ದಾರೆ ಎಂದು ಜೈಲಾಧಿಕಾರಿ ಮೂಲಗಳಿಂದ ತಿಳಿದುಬಂದಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಜೀವನ ಚಿಕ್ಕದಾಗಿದೆ, ಪ್ರತಿದಿನ ಸಂತೋಷದಿಂದಿರಿ ಎಂದಿದ್ದೇಕೆ ರಶ್ಮಿಕಾ ಮಂದಣ್ಣ