Webdunia - Bharat's app for daily news and videos

Install App

ಬೆನ್ನು ನೋವು ತಡೆಯಲಾಗದೇ ಈ ಕೆಲಸ ಮಾಡಲೂ ರೆಡಿಯಾದ ದರ್ಶನ್

Krishnaveni K
ಸೋಮವಾರ, 21 ಅಕ್ಟೋಬರ್ 2024 (14:26 IST)
ಬಳ್ಳಾರಿ: ಬೆನ್ನು ನೋವಿನಿಂದ ಬಳಲುತ್ತಿರುವ ರೇಣುಕಾಸ್ವಾಮಿ ಮರ್ಡರ್ ಹತ್ಯೆ ಆರೋಪಿ ನಟ ದರ್ಶನ್ ಈಗ ಕೊನೆಗೂ ನೋವು ತಡೆಯಲಾಗದೇ ಈ ಕೆಲಸ ಮಾಡಲು ರೆಡಿಯಾಗಿದ್ದಾರೆ.

ನಟ ದರ್ಶನ್ ರನ್ನು ಬಳ್ಳಾರಿ ಜೈಲಿನಲ್ಲಿರಿಸಲಾಗಿದೆ. ಕಳೆದ ವಾರ ಅವರು ಸಲ್ಲಿಸಿದ್ದ ಜಾಮೀನು ಅರ್ಜಿ ತಿರಸ್ಕೃತಗೊಂಡಿದೆ. ಇದಕ್ಕೆ ಮೊದಲು ಅವರನ್ನು ಪರೀಕ್ಷಿಸಿದ್ದ ವಿಮ್ಸ್ ವೈದ್ಯರು ಸ್ಕ್ಯಾನಿಂಗ್ ನಡೆಸಲು ಸಲಹೆ ನೀಡಿದ್ದರು. ಆದರೆ ಏನೇ ಆದ್ರೂ ಸರಿ ನಾನು ಇಲ್ಲಿ ಚಿಕಿತ್ಸೆ ಪಡೆದುಕೊಳ್ಳಲ್ಲ, ಬೆಂಗಳೂರಿಗೆ ಹೋಗಿಯೇ ಚಿಕಿತ್ಸೆ ಪಡೆಯುತ್ತೇನೆ ಎಂದು ದರ್ಶನ್ ಹಠ ಹಿಡಿದು ಕುಳಿತಿದ್ದರು.

ಬಹುಶಃ ಇದೇ ಕಾರಣಕ್ಕೆ ಜಾಮೀನು ಪಡೆಯುವುದು ಅಥವಾ ಬೆಂಗಳೂರಿನ ಜೈಲಿಗೆ ಶಿಫ್ಟ್ ಮಾಡಿಸಿಕೊಳ್ಳಬಹದು ಎಂಬ ಲೆಕ್ಕಾಚಾರ ಅವರಲ್ಲಿದ್ದಿರಬಹುದು. ಆದರೆ ಇದು ಯಾವುದಕ್ಕೂ ಕೋರ್ಟ್ ಜಗ್ಗಲಿಲ್ಲ. ಅವರು ಸಲ್ಲಿಸಿದ್ದ ಜಾಮೀನು ಅರ್ಜಿ ತಿರಸ್ಕೃತವಾಗಿದೆ.

ಆದರೆ ಅವರನ್ನು ಕಾಡುತ್ತಿರುವ ಬೆನ್ನು ನೋವು ಮಾತ್ರ ತೀವ್ರವಾಗಿದೆ. ಕೂರಲೂ ಆಗದೇ ನಿಲ್ಲಲೂ ಆಗದ ಸ್ಥಿತಿಯಲ್ಲಿದ್ದಾರೆ. ಪತ್ನಿ ತಂದುಕೊಟ್ಟ ಬ್ಯಾಗ್ ನ್ನೂ ಎತ್ತಿಕೊಳ್ಳಲು ಕಷ್ಟಪಡುವ ಪರಿಸ್ಥಿತಿಯಾಗಿದೆ. ಹೀಗಾಗಿ ದರ್ಶನ್ ಈಗ ಕೊನೆಗೂ ವೈದ್ಯರು ಹೇಳಿದ್ದನ್ನು ಒಪ್ಪುವ ಸ್ಥಿತಿಗೆ ಬಂದಿದ್ದಾರೆ. ವಿಮ್ಸ್ ವೈದ್ಯರು ಅವರಿಗೆ ಎಂಆರ್ ಐ ಸ್ಕ್ಯಾನಿಂಗ್ ಮಾಡಲು ಸೂಚಿಸಿದ್ದರು. ಅದರಂತೆ ಈಗ ದರ್ಶನ್ ಸ್ಕ್ಯಾನಿಂಗ್ ಮಾಡಿಸಲು ಒಪ್ಪಿಗೆ ನೀಡಿದ್ದಾರಂತೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಅಭಿನಯ ಸರಸ್ವತಿ ಬಿ ಸರೋಜಾದೇವಿಗೆ ಇಂದು ಅಂತಿಮ ಕ್ರಿಯೆ

ರಾಜ್‌ಕುಮಾರ್‌, ಪುನೀತ್ ಹಾದಿಯಲ್ಲೇ ನಡೆದ ಸರೋಜಾ ದೇವಿ, ಸಾವಿನಲ್ಲೂ ಸಾರ್ಥಕತೆ ಮೆರೆದ ಹಿರಿಯ ನಟಿ

ವಿವಾಹದ ಬೆನ್ನಲ್ಲೇ ಆತ್ಮಹತ್ಯೆಗೆ ಶರಣಾದ ಕಪ್ಪು ಸುಂದರಿ ಸ್ಯಾನ್ ರೆಚಲ್‌, ಸಾವಿನ ಸುತ್ತಾ ಹಲವು ಅನುಮಾನ

ಬಿ ಸರೋಜಾದೇವಿ ಕೊನೆಯ ಕ್ಷಣದಲ್ಲಿ ಏನಾಯ್ತು ಇಲ್ಲಿದೆ ವಿವರ

ಹಿಂದೂ ದೇವರ ಮೇಲೆ ಉಚ್ಚೆ, ಕಕ್ಕ ಮಾಡ್ತೀನಿ ಎಂದವನ ಸ್ನೇಹ ಬೇಕಾ: ಯೋಗರಾಜ್ ಭಟ್ ಟ್ರೋಲ್

ಮುಂದಿನ ಸುದ್ದಿ
Show comments