Select Your Language

Notifications

webdunia
webdunia
webdunia
webdunia

ಪದೇ ಪದೇ ಸ್ವಿಚ್ ಆಫ್ ಆಗುವ ಟಿವಿ ಬೇಡವೆಂದ ದರ್ಶನ್

Darshan

Sampriya

ಬಳ್ಳಾರಿ , ಬುಧವಾರ, 11 ಸೆಪ್ಟಂಬರ್ 2024 (18:36 IST)
ಬಳ್ಳಾರಿ: ಪರಪ್ಪನ ಅಗ್ರಹಾರದಲ್ಲಿ ವಿಐಪಿ ಟ್ರೀಟ್‌ಮೆಂಟ್ ಪಡೆದ ಆರೋಪದ ಮೇರೆಗೆ ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿರುವ ದರ್ಶನ್‌ ಅವರು ದಿನ ಕಳೆಯಲು ಕಷ್ಟಪಡುತ್ತಿದ್ದಾರೆ. ಬಳ್ಳಾರಿ ಸೆಂಟ್ರಲ್ ಜೈಲಿಗೆ ಶಿಫ್ಟ್ ಆಗಿ 14ದಿನ ಕಳೆದಿರುವ ದರ್ಶನ್ ಅವರು ಇದೀಗ ಹತ್ಯೆ ಪ್ರಕರಣ ಚಾರ್ಜ್‌ಶೀಟ್‌ನಲ್ಲಿ ತನ್ನ ಪಾತ್ರದ ಬಗ್ಗೆ ಉಲ್ಲೇಖವಾಗಿರುವ ವಿಚಾರಗಳು ತಿಳಿದು ಶಾಕ್ ಆಗಿದ್ದಾರೆ ಎನ್ನಲಾಗಿದೆ.

ಜಾರ್ಜ್‌ಶೀಟ್‌ನ ವಿಷಯಗಳನ್ನು ತಿಳಿಯಲು ಸೆಲ್‌ನ ಒಳಗೆ ಟಿವಿ ಹಾಕಿಸಿಕೊಡುವಂತೆ ದರ್ಶನ್ ಜೈಲಾಧಿಕಾರಿಗಳ ಬಳಿ ಮನವಿ ಮಾಡಿದ್ದರು. ಇದೀಗ ನನಗೆ ಟಿವಿ ಬೇಡ, ತೆಗೆದುಕೊಂಡು ಹೋಗಿ ಎಂದು ಜೈಲಾಧಿಕಾರಿಗಳಿಗೆ ದರ್ಶನ್ ಹೇಳಿದ್ದಾರೆಂಬ ಮಾಹಿತಿಯಿದೆ.

ಟಿವಿಯಲ್ಲಿ ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆ ದರ್ಶನ್ ಟಿವಿ ನೋಡುತ್ತಿದ್ದಾಗ ಪದೇ ಪದೇ ಸ್ವಿಚ್‌ ಆಫ್‌ ಆಗುತ್ತಿತ್ತು ಮತ್ತು ಬ್ಲರ್‌ ಆಗಿ ಚಿತ್ರಗಳು ಕಾಣುತ್ತಿತ್ತು ಎನ್ನಲಾಗಿದೆ. ಟಿವಿಯನ್ನು ರಿಪೇರಿ ಅಥವಾ ಬೇರೆ ಟಿವಿ ಹಾಕಿಸಿಕೊಡಿ ಎಂದು ದರ್ಶನ್ ಜೈಲಾಧಿಕಾರಿಗಳ ಬಳಿ ಕೇಳಿಕೊಂಡಿದ್ದಾರೆ. ಈ ಮನವಿಗೆ ಜೈಲಾಧಿಕಾರಿಗಳು ಬೇರೆ ಟಿವಿ ಇಲ್ಲ ಎಂದು ಉತ್ತರಿಸಿದ್ದಾರೆ. ಇದೀಗ ನನಗೆ ಟಿವಿ ಬೇಡ ಎಂದು ದರ್ಶನ್ ಹೇಳಿರುವುದಾಗಿ ತಿಳಿದುಬಂದಿದೆ.

ಇತ್ತ ಮಾಧ್ಯಮಗಳಲ್ಲಿ ಚಾರ್ಜ್‌ಶೀಟ್‌ ಅಂಶಗಳು ಬಯಲಾಗುತ್ತಿದ್ದ ಹಾಗೇ  ಪತ್ನಿಗೆ ಜೈಲಿನ ದೂರವಾಣಿಯಲ್ಲಿ  ಕರೆ ಮಾಡಿ ಮಾತನಾಡಿದ್ದಾರೆ. ಇಂದು ಭೇಟಿಯಾಗುವಂತೆ ಪತ್ನಿ ಬಳಿ ಹೇಳಿದ್ದಾರೆ. ಆದರೆ ದಿಢೀರನೆ ವಿಜಯಲಕ್ಷ್ಮಿ ಅವರು ದರ್ಶನ್ ಭೇಟಿಯನ್ನು ರದ್ದು ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮದುವೆಯಾದ ಒಂದೇ ತಿಂಗಳಿಗೆ ಗಂಡ ತರುಣ್ ಸುಧೀರ್ ಬಗ್ಗೆ ಸೋನಲ್ ಇದೆಂಥಾ ಮಾತು