Select Your Language

Notifications

webdunia
webdunia
webdunia
webdunia

ಶಿವಣ್ಣನ ತಬ್ಬಿ ಸಂತೈಸಿದ ಡಿ ಬಾಸ್ ದರ್ಶನ್

ಶಿವಣ್ಣನ ತಬ್ಬಿ ಸಂತೈಸಿದ ಡಿ ಬಾಸ್ ದರ್ಶನ್
ಬೆಂಗಳೂರು , ಬುಧವಾರ, 10 ನವೆಂಬರ್ 2021 (10:01 IST)
ಬೆಂಗಳೂರು: ತಮ್ಮ ಪುನೀತ್ ರಾಜ್ ಕುಮಾರ್ ಕಳೆದುಕೊಂಡಿರುವ ದುಃಖದಲ್ಲಿರುವ ಶಿವರಾಜ್ ಕುಮಾರ್ ಗೆ ಡಿ ಬಾಸ್ ದರ್ಶನ್ ಸಾಂತ್ವನ ಹೇಳಿದ್ದಾರೆ.

ನಿನ್ನೆ ಅರಮನೆ ಮೈದಾನದಲ್ಲಿ ಅಪ್ಪು ಸ್ಮರಣಾರ್ಥ ಅಭಿಮಾನಿಗಳಿಗೆ ದೊಡ್ಮನೆ ಕಡೆಯಿಂದ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಈ ವೇಳೆ ದರ್ಶನ್ ನೇರವಾಗಿ ಶಿವಣ್ಣ ಬಳಿ ತೆರಳಿ ಅವರನ್ನು ತಬ್ಬಿ ಸಂತೈಸಿದ್ದಾರೆ.

ದರ್ಶನ್ ಅಂತಿಮ ಸಂಸ್ಕಾರ ಬಂದಿರಲಿಲ್ಲ ಎಂದು ಕೆಲವರು ವ್ಯಂಗ್ಯ ಮಾಡಿದ್ದರು. ಆದರೆ ಪುನೀತ್ ನಿಧನದ ಸುದ್ದಿ ತಿಳಿದ ತಕ್ಷಣ ದರ್ಶನ್ ನೇರವಾಗಿ ಆಸ್ಪತ್ರೆಗೆ ಓಡಿ ಬಂದಿದ್ದರು. ಇದೀಗ 12 ನೇ ದಿನದ ಕಾರ್ಯದ ವೇಳೆ ಆಗಮಿಸಿ ಕುಟುಂಬಸ್ಥರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಿಚ್ಚ ಸುದೀಪ್ ಗಾಗಿ ಮಲೆ ಮಹದೇಶ್ವರ ಬೆಟ್ಟದಲ್ಲಿ ಉರುಳು ಸೇವೆ ಮಾಡಿದ ಫ್ಯಾನ್ಸ್