Select Your Language

Notifications

webdunia
webdunia
webdunia
webdunia

ಕಿಚ್ಚ ಸುದೀಪ್ ಗಾಗಿ ಮಲೆ ಮಹದೇಶ್ವರ ಬೆಟ್ಟದಲ್ಲಿ ಉರುಳು ಸೇವೆ ಮಾಡಿದ ಫ್ಯಾನ್ಸ್

ಕಿಚ್ಚ ಸುದೀಪ್ ಗಾಗಿ ಮಲೆ ಮಹದೇಶ್ವರ ಬೆಟ್ಟದಲ್ಲಿ ಉರುಳು ಸೇವೆ ಮಾಡಿದ ಫ್ಯಾನ್ಸ್
ಬೆಂಗಳೂರು , ಬುಧವಾರ, 10 ನವೆಂಬರ್ 2021 (09:20 IST)
ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಿಂದೆ ಕೊರೋನಾದಿಂದಾಗಿ ತೀವ್ರ ಅನಾರೋಗ್ಯಕ್ಕೊಳಗಾಗಿದ್ದ ವೇಳೆ ಫ್ಯಾನ್ಸ್ ತೀರಾ ಆತಂಕಕ್ಕೀಡಾಗಿದ್ದರು. ಹಲವರು ದೇವರಿಗೆ ಪೂಜೆ ಸಲ್ಲಿಸಿ ತಮ್ಮ ನೆಚ್ಚಿನ ನಟನ ಚೇತರಿಕೆಗೆ ಬೇಡಿಕೊಂಡಿದ್ದರು.

ಸುದೀಪ್ ರ ಕೆಲವು ಅಭಿಮಾನಿಗಳು ಅಂದು ಹರಸಿಕೊಂಡಿದ್ದ ಹರಕೆಯನ್ನು ಇಂದು ಪೂರೈಸಿ ಸುದ್ದಿಯಾಗಿದ್ದಾರೆ. ಕಿಚ್ಚನ ಆರೋಗ್ಯ ಚೇತರಿಸಿಕೊಂಡರೆ ಮಲೆ ಮಹದೇಶ್ವರ ಬೆಟ್ಟದಲ್ಲಿ ಉರುಳು ಸೇವೆ ಮಾಡುವುದಾಗಿ ಹರಸಿಕೊಂಡಿದ್ದರಂತೆ. ಆ ಹರಕೆಯನ್ನು ಫ್ಯಾನ್ಸ್ ನಿನ್ನೆ ನೆರವೇರಿಸಿದೆ.

ಈ ವಿಡಿಯೋಗಳು ಕಿಚ್ಚನ ಗಮನಕ್ಕೂ ಬಂದಿದ್ದು, ಕೈ ಮುಗಿದು ತಮ್ಮ ಮೇಲಿನ ಅಭಿಮಾನದಿಂದ ಉರುಳು ಸೇವೆ ಸಲ್ಲಿಸಿದ ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಫಸ್ಟ್ ನೈಟ್ ಲ್ಲಿ ಏನು ಮಾಡ್ತೀರಾ? ರಚಿತಾ ರಾಂ ಪ್ರಶ್ನೆಗೆ ಪತ್ರಕರ್ತ ತಬ್ಬಿಬ್ಬು!