Select Your Language

Notifications

webdunia
webdunia
webdunia
webdunia

ಅಭಿಮಾನಿಗಳ ಅಭಿಮಾನಕ್ಕೆ ಸಾಟಿಯಾರು? ಸುದೀಪ್ ಅನಾರೋಗ್ಯದ ಅರಕೆ ಸಲ್ಲಿಸಿದ ಪ್ಯಾನ್ಸ್!

ಅಭಿಮಾನಿಗಳ ಅಭಿಮಾನಕ್ಕೆ ಸಾಟಿಯಾರು? ಸುದೀಪ್ ಅನಾರೋಗ್ಯದ ಅರಕೆ ಸಲ್ಲಿಸಿದ ಪ್ಯಾನ್ಸ್!
ಬೆಂಗಳೂರು , ಬುಧವಾರ, 10 ನವೆಂಬರ್ 2021 (08:03 IST)
ಕಿಚ್ಚ ಸುದೀಪ್ ಅವರ ಅಭಿಮಾನಿ ಬಳಗ ದೊಡ್ಡದು. ಫ್ಯಾನ್ಸ್ ಬಗ್ಗೆ ಸುದೀಪ್ ಅಪಾರ ಕಾಳಜಿ ತೋರಿಸುತ್ತಾರೆ.
ಅನಾರೋಗ್ಯದಲ್ಲಿದ್ದ ಎಷ್ಟೋ ಕುಟುಂಬಗಳಿಗೆ ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿ ವತಿಯಿಂದ ಸಹಾಯ ಆಗಿದೆ. ಅದೇ ರೀತಿ ಸುದೀಪ್ ಆರೋಗ್ಯಕ್ಕಾಗಿ ಅಭಿಮಾನಿಗಳು ಕೂಡ ಪ್ರತಿ ದಿನ ದೇವರಲ್ಲಿ ಪ್ರಾರ್ಥಿಸುತ್ತಾರೆ. ಕೆಲವೇ ತಿಂಗಳ ಹಿಂದೆ ಸುದೀಪ್ ಅವರಿಗೆ ಕೊರೊನಾ ವೈರಸ್ ತಗುಲಿತ್ತು. ಆ ಸಂದರ್ಭದಲ್ಲಿ ಅವರು ಬೇಗ ಗುಣಮುಖರಾಗಲಿ ಎಂದು ಫ್ಯಾನ್ಸ್ ಹರಕೆ ಕಟ್ಟಿಕೊಂಡಿದ್ದರು. ಈಗ ಅದನ್ನು ತೀರಿಸಲಾಗಿದೆ.
ತಮ್ಮ ನೆಚ್ಚಿನ ಹೀರೋ ಬೇಗ ಗುಣಮುಖರಾದರೆ ಉರುಳು ಸೇವೆ ಮಾಡುವುದಾಗಿ ಹಲವು ಅಭಿಮಾನಿಗಳು ಹರಕೆ ಮಾಡಿಕೊಂಡಿದ್ದರು. ಮಂಗಳವಾರ (ನ.9) ಆ ಹರಕೆಯನ್ನು ತೀರಿಸಿದ್ದಾರೆ. ಮಲೆ ಮಹದೇಶ್ವರನ ಬೆಟ್ಟದಲ್ಲಿ ಅಭಿಮಾನಿಗಳು ಉರುಳುಸೇವೆ ಮಾಡಿದ್ದಾರೆ. ಅಷ್ಟೇ ಅಲ್ಲದೇ, ಆ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಅದನ್ನು ಕಂಡು ಕಿಚ್ಚ ಸುದೀಪ್ ಧನ್ಯವಾದ ಅರ್ಪಿಸಿದ್ದಾರೆ. ಜನರ ಅಭಿಮಾನಕ್ಕೆ ಅವರು ಮನಸೋತಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಎಲ್ಲರೆದುರೇ ಶಿವರಾಜ್ ಕುಮಾರ್ ಪುತ್ರಿಗೆ ಚಪ್ಪಲಿ ತೊಡಿಸಿದ ಅಳಿಯ!