Select Your Language

Notifications

webdunia
webdunia
webdunia
webdunia

ಜೇಮ್ಸ್ ಸಿನಿಮಾ ಗಲಾಟೆ: ನೇರ ಫಿಲಂ ಚೇಂಬರ್ ಗೇ ಕರೆ ಮಾಡಿದ ಸಿಎಂ

ಜೇಮ್ಸ್ ಸಿನಿಮಾ ಗಲಾಟೆ: ನೇರ ಫಿಲಂ ಚೇಂಬರ್ ಗೇ ಕರೆ ಮಾಡಿದ ಸಿಎಂ
ಬೆಂಗಳೂರು , ಗುರುವಾರ, 24 ಮಾರ್ಚ್ 2022 (09:30 IST)
ಬೆಂಗಳೂರು: ಜೇಮ್ಸ್ ಸಿನಿಮಾ ಥಿಯೇಟರ್ ನಿಂದ ಕಿತ್ತೊಗೆಯಲು ಬಿಜೆಪಿ ನಾಯಕರೇ ಕುಮ್ಮಕ್ಕು ಕೊಡುತ್ತಿದ್ದಾರೆ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪದ ಬಳಿಕ ಅಪ್ಪು ಅಭಿಮಾನಿಗಳು ಬೀದಿಗಿಳಿದು ಪ್ರತಿಭಟನೆ ಆರಂಭಿಸಿದ್ದರು. ಇದರ ನಡುವೆ ಸಿಎಂ ಬಸವರಾಜ ಬೊಮ್ಮಾಯಿ ಮಧ್ಯಪ್ರವೇಶ ಮಾಡಿದ್ದು, ನೇರವಾಗಿ ಫಿಲಂ ಚೇಂಬರ್ ಗೇ ಕರೆ ಮಾಡಿದ್ದಾರೆ.

ಜೇಮ್ಸ್ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿರುವ ಹಿನ್ನಲೆಯಲ್ಲಿ ಥಿಯೇಟರ್ ನಿಂದ ತೆಗೆಯಬಾರದು ಎಂದು ನೇರವಾಗಿ ಸಿಎಂ ಅವರೇ ಫಿಲಂ ಚೇಂಬರ್ ಗೆ ಕರೆ ಮಾಡಿ ಸೂಚನೆ ನೀಡಿದ್ದಾರೆ. ಈ ಹಿನ್ನಲೆಯಲ್ಲಿ ಫಿಲಂ ಚೇಂಬರ್ ನಲ್ಲಿ ಇಂದು ಮಹತ್ವದ ಸಭೆ ನಡೆಯಲಿದೆ.

ವೈಯಕ್ತಿಕವಾಗಿ ಪುನೀತ್ ರಾಜ್ ಕುಮಾರ್ ಅಭಿಮಾನಿಯಾಗಿರುವ ಸಿಎಂ ಬೊಮ್ಮಾಯಿ ಅವರು ನಿಧನರಾದ ಸಂದರ್ಭದಿಂದ ಹಿಡಿದು ಈವರೆಗೂ ರಾಜ್ ಕುಟುಂಬಕ್ಕೆ ಬೆಂಬಲವಾಗಿ ನಿಂತಿದ್ದರು. ಇದೀಗ ಜೇಮ್ಸ್ ಸಿನಿಮಾಗೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ತ್ರಿಬಲ್ ಆರ್ ಕನ್ನಡ ಅವಗಣನೆಗೆ ಕಾರಣ ಯಾರು?