Select Your Language

Notifications

webdunia
webdunia
webdunia
webdunia

ಬೊಂಬೆ ಹೇಳುತೈತೆ ಹಾಡಿನ ವೇಳೆ ಅರ್ಧದಲ್ಲೇ ವೇದಿಕೆಯಿಂದ ಹೊರನಡೆದ ಅಶ್ವಿನಿ

ಬೊಂಬೆ ಹೇಳುತೈತೆ ಹಾಡಿನ ವೇಳೆ ಅರ್ಧದಲ್ಲೇ ವೇದಿಕೆಯಿಂದ ಹೊರನಡೆದ ಅಶ್ವಿನಿ
ಬೆಂಗಳೂರು , ಶನಿವಾರ, 22 ಅಕ್ಟೋಬರ್ 2022 (08:30 IST)
Photo Courtesy: Twitter
ಬೆಂಗಳೂರು: ಗಂಧದ ಗುಡಿ ಪ್ರಿ ರಿಲೀಸ್ ಈವೆಂಟ್ ಹಲವು ಭಾವುಕ ಕ್ಷಣಗಳಿಗೆ ಕಾರಣವಾಯಿತು. ಅದರಲ್ಲೂ ಪುನೀತ್ ಬಗ್ಗೆ ಹೇಳುವಾಗ ಅಶ್ವಿನಿ ಭಾವುಕರಾಗುತ್ತಿದ್ದರು.

ಇನ್ನು, ವಿಜಯ್ ಪ್ರಕಾಶ್ ವೇದಿಕೆ ಮೇಲೆ ಬೊಂಬೆ ಹೇಳುತೈತೆ ಹಾಡನ್ನು ಹಾಡಿದರು. ಕೊನೆಯಲ್ಲಿ ಶಿವಣ್ಣ ನೇತೃತ್ವದಲ್ಲಿ ಇಡೀ ಡಾ.ರಾಜ್ ಕುಟುಂಬ ವೇದಿಕೆಗೆ ಬಂದು ಹಾಡಿಗೆ ಧ್ವನಿಗೂಡಿಸಿತು.

ವೇದಿಕೆಗೆ ಬರುವಾಗಲೇ ಭಾವುಕರಾಗಿ ಬಂದ ಅಶ್ವಿನಿ ಆ ಹಾಡನ್ನು ಹಾಡುತ್ತಿದ್ದಂತೇ ಬಿಕ್ಕಿ ಬಿಕ್ಕಿ ಅತ್ತರು. ಕೊನೆಗೆ ಅಳು ತಡೆಯಲಾಗದೇ ಮಧ್ಯದಿಂದಲೇ ಎದ್ದು ವೇದಿಕೆಯಿಂದ ತೆರಳಿದರು.  ಈ ಕ್ಷಣ ಎಲ್ಲರ ಕಣ್ಣಂಚು ಒದ್ದೆ ಮಾಡಿತು.


-Edited by Rajesh Patil

Share this Story:

Follow Webdunia kannada

ಮುಂದಿನ ಸುದ್ದಿ

ರಾಕಿಂಗ್ ಸ್ಟಾರ್ ಯಶ್ ಮಾತಿಗೆ ಭಾವುಕರಾದ ಅಪ್ಪು ಪುತ್ರಿ