Publish Date: Fri, 21 Oct 2022 (19:06 IST)
Updated Date: Fri, 21 Oct 2022 (19:09 IST)
ಬೆಂಗಳೂರು: ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಗಂಧದ ಗುಡಿ ಪ್ರಿ ರಿಲೀಸ್ ಈವೆಂಟ್ ಪುನೀತ ಪರ್ವ ಕಾರ್ಯಕ್ರಮಕ್ಕೆ ಸಿನಿಮಾ ರಂಗದ ಗಣ್ಯರು ಆಗಮಿಸಿದ್ದಾರೆ.
ಬಹುಭಾಷಾ ನಟ ಶರತ್ ಕುಮಾರ್, ಸುಧಾಮೂರ್ತಿ, ವಿಜಯ್ ಕಿರಗಂದೂರು, ಪ್ರಶಾಂತ್ ನೀಲ್, ಆರ್. ಚಂದ್ರು, ಸುಧಾರಾಣಿ, ಶ್ರುತಿ, ನಿಶ್ವಿಕಾ ನಾಯ್ಡು, ಪ್ರಿಯಾ ಆನಂದ್, ಗಾಯಕ ವಿಜಯ್ ಪ್ರಕಾಶ್, ಅರ್ಮಾನ್ ಮಲಿಕ್, ಕುನಾಲ್ ಗಂಜಾವಾಲ, ಟಿಪ್ಪು, ಗುರುಕಿರಣ್ ಸೇರಿದಂತೆ ಅನೇಕ ಕಲಾವಿದರು ಆಗಮಿಸಿದ್ದಾರೆ.
ಇನ್ನಷ್ಟು ಗಣ್ಯರು ಭಾಗಿಯಾಗಲಿದ್ದಾರೆ. ಇನ್ನು ಡಾ. ರಾಜ್ ಕುಟುಂಬ ವರ್ಗವೇ ಕಾರ್ಯಕ್ರಮದಲ್ಲಿ ಭಾಗಿಯಾಗಿದೆ. ನಟಿ ರಮ್ಯಾ, ಶಿವರಾಜ್ ಕುಮಾರ್, ಪ್ರಭುದೇವ ನೃತ್ಯ ಕಾರ್ಯಕ್ರಮ ನೀಡಲಿದ್ದಾರೆ. ಜೊತೆಗೆ ಸಾವಿರಾರು ಸಂಖ್ಯೆಯಲ್ಲಿ ಫ್ಯಾನ್ಸ್ ಅರಮನೆ ಮೈದಾನದತ್ತ ಬರುತ್ತಿದ್ದಾರೆ.
Edited by Rajesh Patil