Webdunia - Bharat's app for daily news and videos

Install App

ಡ್ರಗ್ ಮಾಫಿಯಾ: ಮಾನ, ವೃತ್ತಿ ಜೀವನ ಹರಾಜಾಗುವ ಭೀತಿಯಲ್ಲಿ ಕಲಾವಿದರು

Webdunia
ಗುರುವಾರ, 24 ಸೆಪ್ಟಂಬರ್ 2020 (09:57 IST)
ಬೆಂಗಳೂರು: ಡ್ರಗ್ ಮಾಫಿಯಾ ಪ್ರಕರಣದಲ್ಲಿ ಹಲವು ನಟ-ನಟಿಯರನ್ನು ಸಿಸಿಬಿ, ಐಎಸ್ ಡಿ, ಎನ್ ಸಿಬಿ ತನಿಖೆ ನಡೆಸುತ್ತಿದೆ. ಆದರೆ ಒಬ್ಬೊಬ್ಬರೇ ನಟ-ನಟಿಯರ ಹೆಸರು ಬಂದೊಡನೆ ಆ ಕಲಾವಿದರ ಎದೆಯಲ್ಲಿ ತಪ್ಪು ಮಾಡದೆಯೂ ಭಯ ಆವರಿಸುವ ಪರಿಸ್ಥಿತಿ ಎದುರಾಗಿದೆ.


ವಿಚಾರಣೆಗೆ ಪೊಲೀಸರು ಕರೆದ ಸುದ್ದಿ ತಿಳಿದ ತಕ್ಷಣ ಮಾಧ‍್ಯಮಗಳಲ್ಲಿ ಅವರ ಬಗ್ಗೆ ದೊಡ್ಡದಾಗಿ ಸುದ್ದಿ ಬಿತ್ತರವಾಗುತ್ತಿದೆ. ಇದರಿಂದಾಗಿ ತಪ್ಪು ಮಾಡಿದ್ದಾರೋ, ಬಿಟ್ಟಿದ್ದಾರೋ ಅವರನ್ನು ಎಲ್ಲರೂ ಅನುಮಾನದ ದೃಷ್ಟಿಯಲ್ಲಿ ನೋಡುವಂತಾಗಿದೆ. ಇದು ತಮ್ಮ ವೃತ್ತಿ ಜೀವನಕ್ಕೆ, ಭವಿಷ್ಯಕ್ಕೆ ಕುತ್ತು ತರುತ್ತದೆ ಎಂಬ ಭಯ, ಆತಂಕದಲ್ಲಿ ಕಲಾವಿದರಿದ್ದಾರೆ. ಈಗಾಗಲೇ ಸಾಮಾನ್ಯ ವಿಚಾರಣೆಗೊಳಗಾದ ಎಲ್ಲಾ ಕಲಾವಿದರೂ ಮಾಧ್ಯಮಗಳ ಮುಂದೆ ಇದೇ ಮನವಿಯನ್ನು ಮಾಡುತ್ತಿದ್ದಾರೆ. ನಾವು ತಪ್ಪು ಮಾಡಿಲ್ಲ. ವಿಚಾರಣೆಗೆ ಕರೆದಿದ್ದಾರಷ್ಟೇ. ತಪ್ಪು ಮಾಡದೇ ನಮ್ಮನ್ನು ಅಪರಾಧಿಗಳಂತೆ ಬಿಂಬಿಸಿ ವೃತ್ತಿಗೆ ಕಂಟಕ ತರಬೇಡಿ ಎಂದು ಹಲವರು ಮನವಿ ಮಾಡುತ್ತಿದ್ದಾರೆ. ಎಷ್ಟೇ ಒಳ್ಳೆಯ ಕೆಲಸ ಮಾಡಿದ್ದರೂ, ಡ್ರಗ್ ಮಾಫಿಯಾದಲ್ಲೂ ಭಾಗಿಯಾಗದೇ ಇದ್ದರೂ ತಮ್ಮ ಮೇಲೆ ಅನುಮಾನದ ದೃಷ್ಟಿ ಬೀಳುವುದರಿಂದ ತಮ್ಮ ಭವಿಷ್ಯಕ್ಕೇ ಕುತ್ತಾಗುತ್ತದೆ ಎಂಬುದು ಇವರೆಲ್ಲರ ಭಯ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನಿಮ್ಮಿಂದಲೇ ಆಗಿದ್ದು ಪವಿತ್ರಾ ಗೌಡ ವಿರುದ್ಧ ಸುಪ್ರೀಂಕೋರ್ಟ್ ಅಸಮಾಧಾನ

ದರ್ಶನ್ ಗೆ ಜಾಮೀನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ: ತೀರ್ಪು ಕಾಯ್ದಿರಿಸಿದ ಕೋರ್ಟ್

ಬಹುನಿರೀಕ್ಷಿತ ಕೊತ್ತಲವಾಡಿ ಸಿನಿಮಾದ ಟ್ರೈಲರ್ ಬಿಡುಗಡೆ: ಆಕ್ಷನ್ ಲುಕ್‌ನಲ್ಲಿ ಮಿಂಚಿದ ಪೃಥ್ವಿ ಅಂಬರ್

ಇದೇ 24ರಂದು ವೀರಮಲ್ಲು ರಿಲೀಸ್‌, ರಾಜಕೀಯಕ್ಕಾಗಿ ದಿಟ್ಟ ನಿರ್ಧಾರ ಕೈಗೊಂಡ ಪವನ್ ಕಲ್ಯಾಣ್

ಮೀ ಟೂನಲ್ಲಿ ಸದ್ದು ಮಾಡಿದ್ದ ಬಾಲಿವುಡ್ ನಟಿ ತನುಶ್ರೀ ದತ್ತಾ ಈಗ ಕಣ್ಣೀರು ಹಾಕುತ್ತಿರುವುದೇಕೆ

ಮುಂದಿನ ಸುದ್ದಿ
Show comments