Select Your Language

Notifications

webdunia
webdunia
webdunia
webdunia

ತನ್ನನ್ನು ಬೆಂಬಲಿಸುವ ಅಭಿಮಾನಿಗಳಿಗೆ ನಟ ಅನಿರುದ್ಧ್ ಜತ್ಕಾರ್ ಹೇಳಿದ್ದೇನು?

ತನ್ನನ್ನು ಬೆಂಬಲಿಸುವ ಅಭಿಮಾನಿಗಳಿಗೆ ನಟ ಅನಿರುದ್ಧ್ ಜತ್ಕಾರ್ ಹೇಳಿದ್ದೇನು?
ಬೆಂಗಳೂರು , ಶನಿವಾರ, 27 ಆಗಸ್ಟ್ 2022 (08:40 IST)
ಬೆಂಗಳೂರು: ಜೊತೆ ಜೊತೆಯಲಿ ಧಾರವಾಹಿಯಿಂದ ಹೊರಬಿದ್ದ ನಂತರ ನಟ ಅನಿರುದ್ಧ್ ಜತ್ಕಾರ್ ಗೆ ಸಾಕಷ್ಟು ಅಭಿಮಾನಿಗಳು ಸಾಮಾಜಿಕ ಜಾಲತಾಣದ ಮೂಲಕ ಬೆಂಬಲ ಸೂಚಿಸುತ್ತಿದ್ದಾರೆ. ಜೊತೆಗೆ ಅಭಿಮಾನಿಗಳ ಗುಂಪೊಂದು ಪ್ರಸ್ ಮೀಟ್ ಮಾಡಿ ನಟನ ಪರವಾಗಿ ಮಾತನಾಡಿದೆ.

ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಅನಿರುದ್ಧ್ ತಮ್ಮನ್ನು ಬೆಂಬಲಿಸುವ ಅಭಿಮಾನಿಗಳಿಗೆ ಸಾಮಾಜಿಕ ಜಾಲತಾಣದ ಮೂಲಕ ಧನ್ಯವಾದ ಸಲ್ಲಿಸಿದ್ದಾರೆ. ನಿಮ್ಮೆಲ್ಲರ ಪ್ರೀತಿಗೆ ನಾನು ಸದಾ ಚಿರಋಣಿ ಎಂದಿದ್ದಾರೆ.

ಈ ನಡುವೆ ಧಾರವಾಹಿಯ ಬಿಕ್ಕಟ್ಟು ಸುಖಾಂತ್ಯವಾಗುವ ಲಕ್ಷಣವಂತೂ ಕಾಣುತ್ತಿಲ್ಲ. ಹಾಗಿದ್ದರೂ ಅಭಿಮಾನಿಗಳು ಮಾತ್ರ ಸೋಷಿಯಲ್ ಮೀಡಿಯಾದಲ್ಲಿ ನಮಗೆ ಆರ್ಯವರ್ಧನ್ ಆಗಿ ಅನಿರುದ್ಧ್ ಅವರೇ ಬೇಕು ಎಂಬ ಅಭಿಯಾನ ಮಾತ್ರ ನಿಲ್ಲಿಸಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಕೆಜಿಎಫ್ ಚಾಚ ಹರೀಶ್ ರಾಯ್ ಗೆ ಸಹಾಯ ಮಾಡಿರುವ ಸ್ಟಾರ್ ನಟಹರೀಶ್ ರಾಯ್,