Select Your Language

Notifications

webdunia
webdunia
webdunia
webdunia

ನಟ ಹರೀಶ್ ರಾಜ್ ವಿರುದ್ಧ ಜೊತೆ ಜೊತೆಯಲಿ ಫ್ಯಾನ್ಸ್ ನಿಂದ ಗೋ ಬ್ಯಾಕ್ ಪ್ರತಿಭಟನೆ

ನಟ ಹರೀಶ್ ರಾಜ್ ವಿರುದ್ಧ ಜೊತೆ ಜೊತೆಯಲಿ ಫ್ಯಾನ್ಸ್ ನಿಂದ ಗೋ ಬ್ಯಾಕ್ ಪ್ರತಿಭಟನೆ
ಬೆಂಗಳೂರು , ಶುಕ್ರವಾರ, 26 ಆಗಸ್ಟ್ 2022 (09:30 IST)
ಬೆಂಗಳೂರು: ನಟ ಅನಿರುದ್ಧ್ ಜತ್ಕಾರ್ ಮಾಡುತ್ತಿದ್ದ ಆರ್ಯವರ್ಧನ್ ಪಾತ್ರಕ್ಕೆ ಜೊತೆ ಜೊತೆಯಲಿ ಧಾರವಾಹಿಗೆ ಸ್ಯಾಂಡಲ್ ವುಡ್ ನ ಪ್ರತಿಭಾವಂತ ನಟ ಹರೀಶ್ ರಾಜ್ ಬರಲಿದ್ದಾರೆ ಎಂಬ ಸುದ್ದಿ ಬಂದಿತ್ತು.

ಹರೀಶ್ ರಾಜ್ ಜೊತೆಗೆ ಧಾರವಾಹಿ ತಂಡ ಮಾತುಕತೆ ನಡೆಸಿರುವುದು ನಿಜ ಎಂದು ಅವರೇ ಒಪ್ಪಿಕೊಂಡಿದ್ದಾರೆ. ಆರ್ಯವರ್ಧನ್ ಪಾತ್ರವಾದರೆ ಖುಷಿಯಿಂದ ಮಾಡುವುದಾಗಿ ಹೇಳಿಕೆ ನೀಡಿದ್ದರು.

ಇದರ ಬೆನ್ನಲ್ಲೇ ಜೊತೆ ಜೊತೆಯಲಿ ಧಾರವಾಹಿ ಅಭಿಮಾನಿಗಳು ಹರೀಶ್ ರಾಜ್ ವಿರುದ್ಧ ಗೋ ಬ್ಯಾಕ್‍ ಎಂದು ಪ್ರತಿಭಟಿಸಿದ್ದಾರೆ. ಅನಿರುದ್ಧ್ ಮಾಡಿದ ಪಾತ್ರಕ್ಕೆ ಅವರೇ ಸೂಕ್ತ. ನಿಮ್ಮ ಮೇಲೆ ನಮಗೆ ಗೌರವವಿದೆ. ಆರ್ಯವರ್ಧನ್ ಪಾತ್ರವನ್ನು ಒಪ್ಪಿಕೊಳ್ಳಬೇಡಿ. ಗೋ ಬ್ಯಾಕ್ ಎಂದು ಫ್ಯಾನ್ಸ್ ಸೋಷಿಯಲ್ ಮೀಡಿಯಾದಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ಆದರೆ ಮೂಲಗಳ ಪ್ರಕಾರ ಹರೀಶ್ ರಾಜ್ ಜೊತೆ ಜೊತೆಯಲಿ ಧಾರವಾಹಿಗೆ ಬರುತ್ತಿರುವುದು ನಿಜ. ಆದರೆ ಆರ್ಯವರ್ಧನ್ ಪಾತ್ರಕ್ಕಲ್ಲ. ಅತಿಥಿ ಕಲಾವಿದರಾಗಿ ಬೇರೊಂದು ಪಾತ್ರ ಮಾಡಲು ಬರಲಿದ್ದಾರೆ ಎಂಬ ಸುದ್ದಿಯೂ ಇದೆ.

Share this Story:

Follow Webdunia kannada

ಮುಂದಿನ ಸುದ್ದಿ

ನೆಗೆಟಿವ್ ಕಾಮೆಂಟ್ ಗಳಿಂದ ಲೈಗರ್ ಗಳಿಕೆಗೆ ಪೆಟ್ಟು