Select Your Language

Notifications

webdunia
webdunia
webdunia
webdunia

ತಮ್ಮ ಪಾಡಿಗೆ ಲವ್ ಯೂ ರಚ್ಚು ಪ್ರಚಾರ ಮಾಡುತ್ತಿರುವ ಅಜೇಯ್ ರಾವ್

ತಮ್ಮ ಪಾಡಿಗೆ ಲವ್ ಯೂ ರಚ್ಚು ಪ್ರಚಾರ ಮಾಡುತ್ತಿರುವ ಅಜೇಯ್ ರಾವ್
ಬೆಂಗಳೂರು , ಬುಧವಾರ, 22 ಡಿಸೆಂಬರ್ 2021 (11:12 IST)
ಬೆಂಗಳೂರು: ನಿರ್ಮಾಪಕ ಗುರುದೇಶ್ ಪಾಂಡೆ ಜೊತೆಗಿನ ವೈಮನಸ್ಯದ ಕಾರಣದಿಂದ ಲವ್ ಯೂ ರಚ್ಚು ಸಿನಿಮಾ ಪ್ರಚಾರಕ್ಕೆ ಚಿತ್ರತಂಡದೊಂದಿಗೆ ಸೇರದೇ ಇರಲು ನಾಯಕ ಅಜೇಯ್ ರಾವ್ ತೀರ್ಮಾನಿಸಿದ್ದಾರೆ.

ನಿರ್ಮಾಪಕರಿಂದ ಅವಮಾನವಾಗಿದೆ. ಹೀಗಾಗಿ ಚಿತ್ರತಂಡದೊಂದಿಗೆ ಪ್ರಚಾರ ಮಾಡಲ್ಲ. ಆದರೆ ಈ ಸಿನಿಮಾ ಬಗ್ಗೆ ನನಗೆ ವಿಶೇಷ ಪ್ರೀತಿಯಿದೆ ಎಂದು ಅಜೇಯ್ ರಾವ್ ಹೇಳಿಕೊಂಡಿದ್ದರು.

ಅದರಂತೆ ಈಗ ತಮ್ಮ ಸೋಷಿಯಲ್ ಮೀಡಿಯಾ ಮುಖಾಂತರ ಲವ್ ಯೂ ರಚ್ಚು ಸಿನಿಮಾ ಪ್ರಚಾರ ಮಾಡುತ್ತಿದ್ದಾರೆ. ಲವ್ ಯೂ ರಚ್ಚು ಪೋಸ್ಟರ್ ಗಳನ್ನು ಶೇರ್ ಮಾಡಿ ತಮ್ಮದೇ ರೀತಿಯಲ್ಲಿ ಪ್ರಚಾರ ಮಾಡುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕನ್ನಡ ಕಿರುತೆರೆ ಶೋಗೆ ಬರ್ತಿದ್ದಾರೆ ಕ್ರಿಕೆಟ್ ದಿಗ್ಗಜ ಅನಿಲ್ ಕುಂಬ್ಳೆ