Select Your Language

Notifications

webdunia
webdunia
webdunia
webdunia

ಅಭಿಮಾನಿಗಳು ಹುಡುಕ್ಕೊಂಡು ಬಂದು ಹೊಡೀತಾರೆ: ನಟ ಆದಿತ್ಯ ಆಕ್ರೋಶಗೊಂಡಿದ್ದೇಕೆ?!

ಅಭಿಮಾನಿಗಳು ಹುಡುಕ್ಕೊಂಡು ಬಂದು ಹೊಡೀತಾರೆ: ನಟ ಆದಿತ್ಯ ಆಕ್ರೋಶಗೊಂಡಿದ್ದೇಕೆ?!
ಬೆಂಗಳೂರು , ಮಂಗಳವಾರ, 23 ಮಾರ್ಚ್ 2021 (10:18 IST)
ಬೆಂಗಳೂರು: ಕಳೆದ ಶುಕ್ರವಾರ ಬಿಡುಗಡೆಯಾದ ಮುಂದುವರೆದ ಅಧ್ಯಾಯ ಸಿನಿಮಾ ಬಗ್ಗೆ ಕೆಟ್ಟದಾಗಿ ವಿಮರ್ಶೆ ಮಾಡಿದವರ ವಿರುದ್ಧ ನಟ ಆದಿತ್ಯ ಎಚ್ಚರಿಕೆ ನೀಡಿದ್ದಾರೆ.



ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಮೂಲಕ ಆದಿತ್ಯ ಎಚ್ಚರಿಕೆ ನೀಡಿದ್ದಾರೆ. ಕೆಲವು ಯೂ ಟ್ಯೂಬಿಗರು, ಸಿನಿಮಾ ಬಗ್ಗೆ ಏನೂ ಗೊತ್ತೇ ಇಲ್ಲದವರು ತಮ್ಮ ಸಿನಿಮಾ ಬಗ್ಗೆ ನೆಗೆಟಿವ್ ವಿಮರ್ಶೆ ಮಾಡುತ್ತಿದ್ದಾರೆ. ಇವರನ್ನೆಲ್ಲಾ ಅಭಿಮಾನಿಗಳು ಹುಡುಕ್ಕೊಂಡು ಬಂದು ಹೊಡೀತಾರೆ ಎಂದು ಆದಿತ್ಯ ಗರಂ ಆಗಿ ಪ್ರತಿಕ್ರಿಯಿಸಿದ್ದಾರೆ.

‘ಸಿನಿಮಾ ಬಗ್ಗೆ ನಿಮಗೇನ್ರೀ ಗೊತ್ತು? ಡೈರೆಕ್ಟರ್, ಆರ್ಟಿಸ್ಟ್ ಆಗಿ ದುಡಿದು ನೋಡಿ. ನಮ್ಮ ಕಷ್ಟ ಏನು ಅಂತ ಗೊತ್ತಾಗುತ್ತೇ? ಹಗಲು ರಾತ್ರಿ ಸಿನಿಮಾವನ್ನು ಕಷ್ಟಪಟ್ಟು ಮಾಡಿದ್ರೆ ಡಬ್ಬಾ ಥರಾ ಮಾತಾಡ್ತೀರಾ. ದುಡ್ಡು ಕೊಡದೇ ಇದ್ರೆ ಸಿನಿಮಾ ಬಗ್ಗೆ ಕೆಟ್ಟದಾಗಿ ಮಾತನಾಡ್ತೀರಿ. ದಯವಿಟ್ಟು ಕನ್ನಡ ಸಿನಿಮಾ ಬಗ್ಗೆ ಕೆಟ್ಟದಾಗಿ ವಿಮರ್ಶೆ ಮಾಡುವುದನ್ನು ನಿಲ್ಲಿಸಿ. ಇಲ್ಲದೇ ಹೋದರೆ ಅಭಿಮಾನಿಗಳು ಹುಡುಕ್ಕೊಂಡು ಬಂದು ಹೊಡೀತಾರೆ’ ಎಂದು ಆದಿತ್ಯ ಎಚ್ಚರಿಕೆ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

67ನೇ ನ್ಯಾಷನಲ್ ಫಿಲ್ಮ್ ಅವಾರ್ಡ್ ನಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದ ನಟ ಧನುಷ್