Select Your Language

Notifications

webdunia
webdunia
webdunia
webdunia

ಎಸ್ ಪಿಬಿ ಚೇತರಿಕೆಗೆ ಶ್ರುತಿ ಕುಟುಂಬದ ಹಾಡು, ಭಾರತಿ ವಿಷ್ಣುವರ್ಧನ್ ಮಾತು

ಎಸ್ ಪಿ ಬಾಲಸುಬ್ರಮಣ್ಯಂ
ಬೆಂಗಳೂರು , ಭಾನುವಾರ, 23 ಆಗಸ್ಟ್ 2020 (10:22 IST)
ಬೆಂಗಳೂರು: ಕೊರೋನಾದಿಂದಾಗಿ ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿರಿಯ ಗಾಯಕ ಎಸ್ ಪಿ ಬಾಲಸುಬ್ರಮಣ್ಯಂ ಚೇತರಿಕೆಗೆ ನಟಿ ಶ್ರುತಿ ಕುಟುಂಬದವರು ಹಾಡಿನ ಮೂಲಕವೇ ಪ್ರಾರ್ಥನೆ ಮಾಡಿದ್ದಾರೆ.


ನಿನ್ನೆ ಗಣೇಶೋತ್ಸವದ ನಿಮಿತ್ತ ಪೂಜೆ ಮಾಡಿ ಬಳಿಕ ಶ್ರುತಿ, ಪುತ್ರಿ, ತಾಯಂದಿರು, ತಂದೆ ಸೇರಿದಂತೆ ಇಡೀ ಕುಟುಂಬವೇ ಜತೆಯಾಗಿ ಕುಳಿತು ಎಸ್ ಪಿಬಿಗಾಗಿ ಹಾಡಿ ಅವರು ಬೇಗ ಗುಣಮುಖರಾಗಲೆಂದು ಶುಭ ಹಾರೈಸಿದ್ದಾರೆ.

ಇನ್ನೊಂದೆಡೆ ಭಾರತಿ ವಿಷ್ಣುವರ್ಧನ್ ಕೂಡಾ ವಿಶೇಷ ವಿಡಿಯೋ ಸಂದೇಶ ನೀಡಿ ಅವರ ಚೇತರಿಕೆಗೆ ಹಾರೈಸಿದ್ದಾರೆ. ಅವರು ನಮ್ಮ ಯಜಮಾನ್ರ ಶಾರೀರ. ಅವರು ಗಾಯಕ ಎನ್ನುವುದಕ್ಕಿಂತ ಒಳ್ಳೆಯ ಮನುಷ್ಯ. ಅವರು ಬೇಗ ಗುಣವಾಗಬೇಕು ಎಂದು ಭಾವುಕರಾಗಿ ಭಾರತಿ ವಿಷ್ಣುವರ್ಧನ್ ಮಾತನಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

‘ಲವ್ ಮಾಕ್ಟೇಲ್’ ತೆಲುಗು ರಿಮೇಕ್ ಸಿನಿಮಾಕ್ಕೆ ಟೈಟಲ್ ಫಿಕ್ಸ್