Select Your Language

Notifications

webdunia
webdunia
webdunia
webdunia

ವಿಜಯಲಕ್ಷ್ಮೀ ಸ್ಟ್ರಾಂಗ್ ಮಹಿಳೆ: ದರ್ಶನ್ ಬಗ್ಗೆ ಮಾಲಾಶ್ರೀ ರಿಯ್ಯಾಕ್ಷನ್

Malashree

Sampriya

ಚಿಕ್ಕಬಳ್ಳಾಪುರ , ಶುಕ್ರವಾರ, 30 ಆಗಸ್ಟ್ 2024 (18:29 IST)
Photo Courtesy X
ಚಿಕ್ಕಬಳ್ಳಾಪುರ: ದರ್ಶನ್‌ ತುಂಬಾನೇ ಒಳ್ಳೆಯ ವ್ಯಕ್ತಿ. ನಾನು ದೇವರು ಮತ್ತು ಕಾನೂನನ್ನು ನಂಬಿದ್ದೇನೆ ಎಂದು ನಟಿ ಮಾಲಾಶ್ರೀ ಹೇಳಿದರು.

ದರ್ಶನ್ ಅವರು ನನಗೆ ಕಲಾಸಿಪಾಳ್ಯ ಸಿನಿಮಾದಿಂದ ಗೊತ್ತು. ಅಂದಿನಿಂದ ಕಾಟೇರ ಸಿನಿಮಾ ಜರ್ನಿಯವರೆಗೂ ನಮ್ಮೊಂದಿಗೆ ಸರಳವಾಗಿ, ಅಷ್ಟೇ ಗೌರಯುವತವಾಗಿ ನಡೆದುಕೊಂಡು ಬಂದಿದ್ದಾರೆ. ನಾನು ಅವರಿಗೆ ತುಂಬಾನೇ ಕೃತಜ್ಞಳಾಗಿದ್ದೇನೆ. ನನ್ನ ಮಗಳಿಗೆ ಅವರ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಸಿಕ್ಕಿತು. ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ಆರಾಧಳನ್ನು ತುಂಬಾನೇ ಕೇರ್ ಮಾಡಿದ್ದಾರೆ. ನಟನೆ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ನನ್ನ ಮಗಳು ತುಂಬಾನೇ ಅದೃಷ್ಟವಂತಳು ಎಂದರು.

ರೇಣುಕಾಸ್ವಾಮಿ ಪ್ರಕರಣದ ಬಗ್ಗೆ ಕೇಳಿದಾಗ, ನನಗೆ ಆ ವಿಚಾರದ ಬಗ್ಗೆ ಗೊತ್ತಿಲ್ಲ. ಆದರೆ ನನಗೆ ಕಾನೂನು ಮತ್ತು ದೇವರ ಮೇಲೆ ನಂಬಿಕೆಯಿದೆ ಎಂದರು.

ದರ್ಶನ್ ಅವರ ಪತ್ನಿ ವಿಜಯಲಕ್ಷ್ಮೀ ಜೀವನದಲ್ಲಿ ತುಂಬಾನೇ ಏರಿಳಿತವನ್ನು ನೋಡಿದ್ದಾರೆ. ಆಕೆ ತುಂಬಾನೇ ಸ್ಟ್ರಾಂಗ್‌ ಮಹಿಳೆ. ಇದರಿಂದನೂ ಆಕೆ ಹೊರಬರುತ್ತಾಳೆಂಬ ನಂಬಿಕೆಯಿದೆ ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ರಾಷ್ಟ್ರದ ಬಗ್ಗೆ ಗೊತ್ತಿರುವುದು ಇಷ್ಟೇನಾ, ಕಂಗನಾ ರಣಾವತ್ ಕಾಲೆಳೆದ ನೆಟ್ಟಿಗರು