Select Your Language

Notifications

webdunia
webdunia
webdunia
webdunia

ನಟ ನೀನಾಸಂ ಸತೀಶ್ ಯಾವ ಕೆಲಸಕ್ಕೆ ಕೈ ಹಾಕಿದ್ದಾರೆ ಗೊತ್ತಾ…?

ನಟ ನೀನಾಸಂ ಸತೀಶ್ ಯಾವ ಕೆಲಸಕ್ಕೆ ಕೈ ಹಾಕಿದ್ದಾರೆ ಗೊತ್ತಾ…?
ಬೆಂಗಳೂರು , ಸೋಮವಾರ, 18 ಜೂನ್ 2018 (12:45 IST)
ಬೆಂಗಳೂರು : ಇತ್ತೀಚೆಗಷ್ಟೇ ತಾನೊಂದು ಹೊಸ ಕೆಲಸ ಮಾಡಲು ಮುಂದಾಗಿದ್ದು, ಸದ್ಯದಲ್ಲೆ ಅದರ ಬಗ್ಗೆ ಮಾಹಿತಿ ಕೊಡುತ್ತೇನೆ ಎಂದು  ತಿಳಿಸಿದ್ದ ಸ್ಯಾಂಡಲ್ ವುಡ್ ನಟ ಸತೀಶ್ ಅವರು ಇದೀಗ ಆ ಹೊಸ ಯೋಜನೆಯ ಬಗ್ಗೆ ಬಹಿರಂಗಪಡಿಸಿದ್ದಾರೆ.


ಅದೇನೆಂದರೆ ನಟ ಸತೀಶ್ ಅವರು ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಹುಲ್ಲೆಗಾಲ ಹಳ್ಳಿಯನ್ನು ದತ್ತು ಪಡೆದುಕೊಂಡಿದ್ದಾರೆ. ಈ ಮೂಲಕ ಹಳ್ಳಿಗಳ ಸಮಸ್ಯೆಯನ್ನು ಬಗೆಹರಿಸಿ, ಆ ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ಮಾಡಬೇಕೆಂಬ ಆಶಯದೊಂದಿಗೆ ಮಹತ್ವದ ಕೆಲಸವೊಂದಕ್ಕೆ ಕೈಹಾಕಿದ್ದಾರೆ. ಈ ವಿಷ್ಯವನ್ನು ಖುದ್ದು ಸತೀಶ್ ಅವರೇ ಫೇಸ್‍ಬುಕ್ ನಲ್ಲಿ ತಿಳಿಸಿದ್ದಾರೆ.


ಟೀಮ್ ಸತೀಶ್ ಪಿಕ್ಚರ್ಸ್ ಅಡಿಯಲ್ಲಿ ಸತೀಶ್ ನೀನಾಸಂ ಅವರ ಸಾರಥ್ಯದಲ್ಲಿ ಹುಲ್ಲೆಗಾಲ ಹಳ್ಳಿಯನ್ನು ದತ್ತು ಪಡೆಯಲಾಗಿದ್ದು, ಸಹಾಯ ಮಾಡಬೇಕೆಂಬ ತುಡಿತ ಇರುವವರು, ಟೀಮ್ ಸತೀಶ್ ಪಿಕ್ಚರ್ಸ್‌ಗೆ ಸೇರಿಕೊಳ್ಳಬಹುದು, ಆದರೆ ತಂಡಕ್ಕೆ ಸೇರುವವರಿಗೆ ಕೆಲವೊಂದಿಷ್ಟು ಷರತ್ತುಗಳು ಅನ್ವಯವಾಗುವುದಾಗಿ ಅವರು ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನಟ ರಣಬೀರ್ ಕಪೂರ್ ರಲ್ಲಿ ಸಕಾರಾತ್ಮಕ ಬದಲಾವಣೆಯಾಗಲು ಈಕೆಯೇ ಕಾರಣವಂತೆ!