Select Your Language

Notifications

webdunia
webdunia
webdunia
webdunia

ಎರಡು ನಿಮಿಷ ವಿಚಾರಣೆ ಮಾಡಿದ್ದಕ್ಕೆ ಫುಲ್ ಗಾಬರಿ ಬಿದ್ದ ನಟ ಚಿಕ್ಕಣ್ಣ

Chikkanna

Krishnaveni K

ಬೆಂಗಳೂರು , ಮಂಗಳವಾರ, 18 ಜೂನ್ 2024 (12:37 IST)
Photo Credit: Facebook
ಬೆಂಗಳೂರು: ರೇಣಿಕಾಸ್ವಾಮಿ ಹತ್ಯೆ ಕೇಸ್ ನಲ್ಲಿ ಬಂಧಿತರಾಗಿರುವ ನಟ ದರ್ಶನ್ ಜೊತೆ ಪಾರ್ಟಿ ಮಾಡಿದ್ದರೆಂಬ ಕಾರಣಕ್ಕೆ ಪೊಲೀಸರು ನಿನ್ನೆ ನಟ ಚಿಕ್ಕಣ್ಣ ಅವರನ್ನು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ಕರೆಸಿ ವಿಚಾರಣೆ ನಡೆಸಿತ್ತು.

ಚಿಕ್ಕಣ್ಣರ ಮನೆಗೆ ತೆರಳಿದ್ದ ಪೊಲೀಸರು ಮೊದಲು ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಿದ್ದರು. ಬಳಿಕ ತಾವೇ ಚಿಕ್ಕಣ್ಣನನ್ನು ಕರೆದುಕೊಂಡು ಸ್ಟೋನಿ ಬ್ರೂಕ್ ರೆಸ್ಟೋರೆಂಟ್ ನಲ್ಲಿ ಸ್ಥಳ ಮಹಜರಿಗೂ ತೆರಳಿದ್ದರು. ಹತ್ಯೆಗೆ ಮೊದಲು ದರ್ಶನ್ ಇಲ್ಲಿಯೇ ಚಿಕ್ಕಣ್ಣ ಸೇರಿದಂತೆ ತಮ್ಮ ಸಂಗಡಿಗರ ಜೊತೆ ಪಾರ್ಟಿ ಮಾಡಿದ್ದರು ಎನ್ನಲಾಗಿದೆ.

ಈ ಕಾರಣಕ್ಕೆ ಚಿಕ್ಕಣ್ಣರನ್ನು ವಿಚಾರಣೆ ನಡೆಸಲಾಗಿತ್ತು. ಕೆಲವು ಹೊತ್ತು  ವಿಚಾರಣೆ ನಡೆಸಿದ ಬಳಿಕ ಪೊಲೀಸರು ಚಿಕ್ಕಣ್ಣರನ್ನು ಬಿಟ್ಟು ಕಳುಹಿಸಿದ್ದರು. ಇದಕ್ಕೆ ಮೊದಲು ದರ್ಶನ್ ಪಾರ್ಟಿಯಲ್ಲಿ ಯಾವ ರೀತಿ ಇದ್ದರು, ಯಾರ ಜೊತೆಗೆ ಮಾತನಾಡುತ್ತಿದ್ದರು, ಅವರಿಗೆ ಕರೆ ಬರುತ್ತಿತ್ತಾ ಎಂದೆಲ್ಲಾ ಪೊಲೀಸರು ಪ್ರಶ್ನೆ ಕೇಳಿದ್ದರು ಎನ್ನಲಾಗಿದೆ.

ಪೊಲೀಸರ ಕೆಲವೇ ಕ್ಷಣಗಳ ವಿಚಾರಣೆ ಬಳಿಕ ಚಿಕ್ಕಣ್ಣ ಗಾಬರಿ ಬಿದ್ದು ಹೋಗಿದ್ದಾರೆ ಎಂದು ಅವರ ಮುಖ ನೋಡಿದರೇ ಸ್ಪಷ್ಟವಾಗುತ್ತಿತ್ತು. ಮಾಧ್ಯಮಗಳು ಪ್ರಶ್ನಿಸಿದಾಗಲೂ ತೀರಾ ಸಣ್ಣ ಧ್ವನಿಯಲ್ಲಿ ಚುಟುಕಾಗಿ ಒಂದು ಹೇಳಿಕೆ ಕೊಟ್ಟರಷ್ಟೇ ಹೊರತು ಹೆಚ್ಚು ಏನೂ ಮಾತನಾಡಲಿಲ್ಲ. ಇದನ್ನು ನೋಡಿದರೆ ಈ ಪ್ರಕರಣದ ಗಂಭೀರತೆ ಎಷ್ಟಿದೆ ಎನ್ನುವುದು ಗೊತ್ತಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ದರ್ಶನ್ ರಿಂದಾಗಿ ಬ್ಯಾನ್ ಆಗಿದ್ದ ನಟಿ ನಿಖಿತಾ ತುಕ್ರಾಲ್ ಈಗ ಹೀಗಿದ್ದಾರೆ