Select Your Language

Notifications

webdunia
webdunia
webdunia
webdunia

ಐಪಿಎಲ್ ರದ್ದಾದ ಮೇಲೂ ಧೋನಿ ಹೃದಯವಂತಿಕೆಗೆ ಸಿಎಸ್ ಕೆ ಫ್ಯಾನ್ಸ್ ಫಿದಾ

ಐಪಿಎಲ್ ರದ್ದಾದ ಮೇಲೂ ಧೋನಿ ಹೃದಯವಂತಿಕೆಗೆ ಸಿಎಸ್ ಕೆ ಫ್ಯಾನ್ಸ್ ಫಿದಾ
ಮುಂಬೈ , ಶುಕ್ರವಾರ, 7 ಮೇ 2021 (10:14 IST)
ಮುಂಬೈ: ಐಪಿಎಲ್ 14 ರದ್ದಾಗಿದೆ. ತಮ್ಮ ತಂಡಗಳ ಜೊತೆ ಬೇರೆ ಬೇರೆ ನಗರಗಳಲ್ಲಿ ಬೀಡುಬಿಟ್ಟಿದ್ದ ಕ್ರಿಕೆಟಿಗರು ಒಬ್ಬೊಬ್ಬರಾಗಿ ತವರು ಸೇರಿಕೊಂಡಿದ್ದಾರೆ. ಆದರೆ ಸಿಎಸ್ ಕೆ ನಾಯಕ ಧೋನಿ ಮಾತ್ರ ತಡವಾಗಿ ತವರಿಗೆ ತೆರಳಲು ನಿರ್ಧರಿಸಿದ್ದಾರೆ.


ಇದಕ್ಕೆ ಕಾರಣವೇನು ಗೊತ್ತಾ? ಐಪಿಎಲ್ ರದ್ದಾದ ಮೇಲೆ ಕ್ರಿಕೆಟಿಗರಿಗೆ ತವರಿಗೆ ತೆರಳುವುದೇ ಸಮಸ್ಯೆಯಾಗಿದೆ. ಅದರಲ್ಲೂ ವಿದೇಶೀ ಆಟಗಾರರಿಗೆ ಪ್ರಯಾಣ ನಿರ್ಬಂಧದಿಂದಾಗಿ ಕಷ್ಟವಾಗುತ್ತಿದೆ.

ಹೀಗಾಗಿ ಈಗ ಧೋನಿ ತಮ್ಮ ತಂಡದ ವಿದೇಶೀ ಆಟಗಾರರು, ಸಹಾಯಕ ಸಿಬ್ಬಂದಿಗಳು ಹಾಗೂ ದೇಶೀಯ ಆಟಗಾರರು ಅವರ ತವರು ಸುರಕ್ಷಿತವಾಗಿ ತಲುಪಿದ ಬಳಿಕವೇ ತಮ್ಮ ತವರಿಗೆ ತೆರಳಲು ನಿರ್ಧರಿಸಿದ್ದಾರಂತೆ. ಇದಲ್ಲವೇ ಒಬ್ಬ ರಿಯಲ್ ನಾಯಕನ ಲಕ್ಷಣ?

Share this Story:

Follow Webdunia kannada

ಮುಂದಿನ ಸುದ್ದಿ

ಕೊರೋನಾ ಲಸಿಕೆ ಪಡೆದುಕೊಂಡ ಕ್ರಿಕೆಟಿಗ ಶಿಖರ್ ಧವನ್