Webdunia - Bharat's app for daily news and videos

Install App

Pehalgam terror attack: ದಾಳಿಯ ರೂವಾರಿ ಈತನೇ, ಉಗ್ರ ಸೈಫುಲ್ಲಾಗಿದೆ ಭಾರತದ ಪ್ರಧಾನಿಗಿಂತಲೂ ಭದ್ರತೆ, ಪಾಕಿಸ್ತಾನದಲ್ಲಿ ವಿಐಪಿ

Krishnaveni K
ಬುಧವಾರ, 23 ಏಪ್ರಿಲ್ 2025 (10:57 IST)
Photo Credit: X
ನವದೆಹಲಿ: ಜಮ್ಮು ಕಾಶ್ಮೀರದ ಪೆಹಲ್ಗಾಮ್ ನಲ್ಲಿ ಅಮಾಯಕ ಪ್ರವಾಸೀ ಹಿಂದೂಗಳನ್ನು ಗುರಿಯಾಗಿರಿಸಿಕೊಂಡು ದಾಳಿ ಮಾಡಿದ ಭಯೋತ್ಪಾದಕ ಸಂಘಟನೆ ಟಿಆರ್ ಎಫ್. ಇದು ಲಷ್ಕರ್ ತೊಯ್ಬಾ ಸಂಘಟನೆಯ ಅಂಗ ಸಂಸ್ಥೆಯಾಗಿದೆ. ಪೆಹಲ್ಗಾಮ್ ದಾಳಿಯ ರೂವಾರಿ ಸೈಫುಲ್ಲಾ ಕಸೂರಿ. ಈ ಉಗ್ರನಿಗೆ ಭಾರತದ ಪ್ರಧಾನಿಗಿಂತಲೂ ಹೆಚ್ಚಿನ ಭದ್ರತೆಯಿದೆ, ಪಾಕಿಸ್ತಾನದಲ್ಲಿ ಈತನಿಗೆ ಫುಲ್ ವಿಐಪಿ ಟ್ರೀಟ್ ಮೆಂಟ್ ಸಿಗುತ್ತದೆ.

ಪೆಹಲ್ಗಾಮ್ ನಲ್ಲಿ ನಿನ್ನೆ ಸುಮಾರು 7 ಜನ ಉಗ್ರರ ಗುಂಪು ಭಾರತೀಯ ಸೇನೆಯವರಂತೇ ಸಮವಸ್ತ್ರ ಧರಿಸಿ ಪ್ರವಾಸಿಗರಿರುವ ಸ್ಥಳಕ್ಕೆ ಬಂದು ಧರ್ಮ ಯಾವುದು ಎಂದು ಕೇಳಿ ಗುಂಡು ಹೊಡೆದು ಸುಮಾರು 26 ಮಂದಿಯನ್ನು ಸಾಯಿಸಿದ್ದಾರೆ. ಈ ದಾಳಿಯ ಬಗ್ಗೆ ಭಾರತದಾದ್ಯಂತ ಆಕ್ರೋಶ ವ್ಯಕ್ತವಾಗಿದೆ.

ಇನ್ನು, ಈ ದಾಳಿಯ ಹೊಣೆಯನ್ನು ಟಿಆರ್ ಎಫ್ ಉಗ್ರ ಸಂಘಟನೆ ಹೊತ್ತುಕೊಂಡಿದೆ. ಇದರ ಮಾಸ್ಟರ್ ಮೈಂಡ್ ಸೈಫುಲ್ಲಾ ಕಸೂರಿ. ಈತ ಲಷ್ಕರ್ ಸಂಘಟನೆಯ ಪ್ರಮುಖ ವ್ಯಕ್ತಿಯೂ ಹೌದು. ಪಾಕಿಸ್ತಾನದಲ್ಲಿ ಈತ ಎಲ್ಲೇ ಹೋದರೂ ವಿಐಪಿ ಟ್ರೀಟ್ ಮೆಂಟ್. ಸ್ವತಃ ಪಾಕಿಸ್ತಾನ ಸೇನೆಯೇ ಈತನಿಗೆ ರತ್ನಗಂಬಳಿ ಹಾಸಿ ನೋಡಿಕೊಳ್ಳುತ್ತದೆ. ಇತ್ತೀಚೆಗೆ ಪಾಕ್ ಆಕ್ರಮಿತ ಪಂಜಾಬ್ ಪ್ರಾಂತ್ಯದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ.

ಇನ್ನು ಮುಂದೆ ನಮ್ಮ ಸಂಘಟನೆ ದಾಳಿ ತೀವ್ರ ಗೊಳಿಸುತ್ತದೆ. ಮುಂದಿನ ವರ್ಷ ಫೆಬ್ರವರಿ ವೇಳೆಗೆ ಕಾಶ್ಮೀರ ಸ್ವತಂತ್ರವಾಗಲಿದೆ ಎಂದು ಬಡಬಡಿಸಿಕೊಂಡಿದ್ದ. ಈತ ಭಾರತದ ಪ್ರಮುಖ ಶತ್ರು, ಉಗ್ರ ಹಫೀಜ್ ಸಯೀದ್ ನ ನಿಕಟವರ್ತಿ ಎನ್ನಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Pehalgam attack: ಮುಸ್ಲಿಂ ಧಾರ್ಮಿಕ ಪಠಣ ಹೇಳು ಎಂದ ಗೊತ್ತಿಲ್ಲ ಎಂದಿದ್ದಕ್ಕೆ ಕೊಂದೇ ಬಿಟ್ಟ

Gold Price today: ಸರ್ವಕಾಲಿಕ ದಾಖಲೆ ಬರೆದ ಚಿನ್ನದ ಬೆಲೆ, ಇಂದು ಎಷ್ಟಾಗಿದೆ ನೋಡಿ

Pehalgam terror attack: ಭಾರತೀಯ ಯೋಧರನ್ನು ಕಂಡರೂ ಭಯದಿಂದ ಅತ್ತ ಪ್ರವಾಸಿಗರ ಕರುಳು ಹಿಂಡುವ ವಿಡಿಯೋ ಇಲ್ಲಿದೆ ನೋಡಿ

Pehalgam: ಸೌದಿ ಅರೇಬಿಯಾ ಪ್ರವಾಸ ಬೇಡ, ದೇಶವೇ ಮುಖ್ಯ: ಪ್ರಧಾನಿ ಮೋದಿ ದೇಶಕ್ಕೆ ವಾಪಸ್, ಇಂದು ಮಹತ್ವದ ಮೀಟಿಂಗ್

Pehalgam terror attack: ಕನ್ನಡಿಗರ ರಕ್ಷಣೆಗೆ ತೆರಳುತ್ತಿದ್ದ ಸಚಿವ ಸಂತೋಷ್ ಲಾಡ್ ಹುಬ್ಬಳ್ಳಿಯಲ್ಲಿ ಪರದಾಟ

ಮುಂದಿನ ಸುದ್ದಿ
Show comments