Pehalgam terror attack: ದಾಳಿಯಲ್ಲಿ ಉಗ್ರರಿಂದ ಈ ಕನ್ನಡಿಗ ಮಹಿಳೆಯನ್ನು ಬದುಕಿಸಿದ್ದು ಒಂದು ಐಸ್ ಕ್ರೀಂ

Krishnaveni K
ಬುಧವಾರ, 23 ಏಪ್ರಿಲ್ 2025 (10:39 IST)
Photo Credit: X
ಪೆಹಲ್ಗಾಮ್: ಉಗ್ರ ದಾಳಿಯಲ್ಲಿ 26 ಜನ ಸಾವನ್ನಪ್ಪಿರುವುದು ಖಚಿತವಾಗಿದ್ದರೆ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ನಡುವೆ ಕನ್ನಡಿಗರೊಬ್ಬರು ಉಗ್ರರ ದಾಳಿಯಿಂದ ನಮ್ಮನ್ನು ಕಾಪಾಡಿದ್ದು ಒಂದು ಐಸ್ ಕ್ರೀಂ ಎಂದಿದ್ದಾರೆ.

ಬೆಂಗಳೂರಿನ ನ್ಯೂ ತಿಪ್ಪಸಂದ್ರದ ಸುಮನಾ ಭಟ್ ಕೂಡಾ ತಾವು ಕೆಲಸ ಮಾಡುತ್ತಿದ್ದ ಟೈಮೆಕ್ಸ್ ಸಂಸ್ಥೆಯ 17 ಮಂದಿ ಉದ್ಯೋಗಿಗಳೊಂದಿಗೆ ಕಾಶ್ಮೀರ ಪ್ರವಾಸ ಮಾಡಿದ್ದರು. ಇನ್ನೇನು ಅವರು ಪೆಹಲ್ಗಾಮ್ ಗೆ ತಲುಪಬೇಕಿತ್ತು.

ಆದರೆ ಅವರನ್ನು ಐಸ್ ಕ್ರೀಂ ತಿನ್ನುವ ಬಯಕೆ ಕಾಪಾಡಿತ್ತು. ಗೈಡ್ ಗಳು ಪೆಹಲ್ಗಾಮ್ ಬಗ್ಗೆ ಹೇಳಿದ್ದರಿಂದ ಕುದುರೆ ಮೇಲೆ ಹೊರಟಿದ್ದೆವು. ಆದರೆ ಮಧ್ಯೆ ನಮಗೆ ಐಸ್ ಕ್ರೀಂ ತಿನ್ನುವ ಬಯಕೆಯಾಯಿತು. ಹೀಗಾಗಿ ಐಸ್ ಕ್ರೀಂ ತಿನ್ನುತ್ತಾ ಹಿಂದೆ ಉಳಿದೆವು. ಉಳಿದ ಪ್ರವಾಸಿಗರು ಮುಂದೆ ಹೋಗಿದ್ದರು.

ಐಸ್ ಕ್ರೀಂ ತಿನ್ನುವ ದೆಸೆಯಿಂದ ಹಿಂದೆ ಉಳಿದಿದ್ದರಿಂದ ನಮ್ಮ ಜೀವ ಉಳಿಯಿತು ಎಂದು ಸುಮನಾ ಭಟ್ ಹೇಳಿದ್ದಾರೆ. ಪೆಹಲ್ಗಾಮ್ ಗೆ ತಲುಪಲು 3 ಕಿ.ಮೀ. ಇರುವಾಗ ನಮ್ಮನ್ನು ವಾಪಸ್ ಹೋಗಲು ಹೇಳಿದರು. ಅಂತೆಯೇ ನಾವು 3 ಕಿ.ಮೀ. ನಡೆದು ನಮ್ಮ ಹೋಟೆಲ್ ಗೆ ಬಂದು ಮಿಲಿಟರಿ ವಾಹನದಲ್ಲಿ ಜಮ್ಮುವಿಗೆ ವಾಪಸ್ ಆದೆವು ಎಂದು ಸುಮನಾ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಗೃಹಲಕ್ಷ್ಮಿ ಹಣ ಬಂದಿಲ್ಲ ಸಾರ್ ಎಂದು ನಾಟಕವಾಡಿದ ಮಹಿಳೆ: ಡಿಕೆ ಶಿವಕುಮಾರ್ ಮಾಡಿದ್ದೇನು

ನೀವು ರಸ್ತೆ ಅಭಿವೃದ್ಧಿ ಮಾಡುವುದಾದರೆ ಮಾಡಿ: ಕಿರಣ್ ಮಜುಂದಾರ್‌ಗೆ ಡಿಕೆ ಶಿವಕುಮಾರ್ ಕೌಂಟರ್‌

ಮೈದಾನ, ರಸ್ತೆಯಲ್ಲಿ ನಮಾಜ್ ಮಾಡಲು ಮುಸ್ಲಿಮರು ಅನುಮತಿ ಪಡೆಯುತ್ತಾರಾ: ಕೆಎಸ್ ರಾಜಣ್ಣ ಪ್ರಶ್ನೆ

ಶಬರಿಮಲೆ ಸುತ್ತಲಿನ ವಿವಾದ ಭಕ್ತರಿಗೆ ಯಾವುದೇ ಪರಿಣಾಮ ಬೀರಿಲ್ಲ: ಟಿಡಿಬಿ

ಪಾಕ್‌ನ ಮೂಲೆ ಮೂಲೆಗೂ ನುಗ್ಗುವ ಸಾಮರ್ಥ್ಯ ಭಾರತದ ಬ್ರಹ್ಮೋಸ್ ಕ್ಷಿಪಣಿಗಿದೆ: ರಾಜನಾಥ ಸಿಂಗ್

ಮುಂದಿನ ಸುದ್ದಿ
Show comments